Advertisement

ಕೋಳಿ ಸಾರು ಸವಿಯಲು ಬಂದ ಸ್ನೇಹಿತರು ಬಡಿಗೆಯಲ್ಲಿ ಹೊಡೆದಾಡಿಕೊಂಡರು!

05:35 PM Aug 05, 2022 | Team Udayavani |

ಹೊಳೆಹೊನ್ನೂರು: ಸಮೀಪದ ಚಂದನಕೆರೆಯಲ್ಲಿ ಕೋಳಿ ಸಾರು ಸವಿಯಲೆಂದು ಸ್ನೇಹಿತರ ಮನೆಗೆ ಬಂದು, ಬಡಿಗೆಯಲ್ಲಿ ಹೊಡೆದಾಡಿದ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

Advertisement

ಆ. 2ರರಂದು ಚಂದನಕೆರೆ ಗ್ರಾಮದ ಯಶವಂತ್​ ರಾವ್​ ಎಂಬವರು ಊರಿಗೆ ಬಂದಿದ್ದ ತಮ್ಮ ಸ್ನೇಹಿತನಿಗಾಗಿ ದೇವೇಂದ್ರಪ್ಪ ಎಂಬವರ ಮನೆಯಲ್ಲಿ ಕೋಳಿ ಸಾರು ಅಡುಗೆ ಮಾಡಿಸಿದ್ದರು. ರಾತ್ರಿ ಸ್ನೇಹಿತನ ಜೊತೆ ದೇವೇಂದ್ರಪ್ಪರ ಮನೆಯಲ್ಲಿ ಊಟ ಮಾಡುತ್ತಿದ್ದಾಗ, ಅಲ್ಲಿಗೆ ರಾಕೇಶ್ ಹಾಗೂ ಸಂತೋಷ್ ಎಂಬವರು ಬಂದಿದ್ದಾರೆ. ಇವರಿಗೂ ಊಟಕ್ಕೆ ಆಹ್ವಾನಿಸಿದ್ದಾರೆ. ಅವರು ಸಹ ಊಟ ಮಾಡಿದ್ದಾರೆ. ಈ ಮಧ್ಯೆ ರಾಕೇಶ್ ಎಂಬಾತ ಊಟಕ್ಕೆ ಕೂರದೇ ಯಶವಂತ್ ಜೊತೆ ಜಗಳ ಮಾಡಿ, ಬಡಿಗೆಯಿಂದ ಹಲ್ಲೆ ಮಾಡಿದ್ದಾರೆ.

ಅಲ್ಲಿ ದೇವೇಂದ್ರಪ್ಪ ಹಾಗೂ  ಸ್ನೇಹಿತರು ಜಗಳ ಬಿಡಿಸಿ ಕಳುಹಿಸಿದ್ದಾರೆ. ಆದರೆ ದಾರಿ ಮಧ್ಯೆ ಮತ್ತೆ ದೂರುದಾರರನ್ನು ಅಡ್ಡಹಾಕಿದ ಸಂತೋಷ್ ಹಾಗೂ ರಾಕೇಶ್ ಕಲ್ಲುಗಳಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಸೈಜ್​ಕಲ್ಲೊಂದನ್ನ ಎತ್ತಿಹಾಕಿ ಗಾಯಗೊಳಿಸಿದ್ದಾರೆ. ಜತೆಯಲ್ಲಿ ದೂರುದಾರರ ಹೆಂಡತಿ ಮೇಲೂ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ:ಬಲೂಚಿಸ್ತಾನ್: ಗ್ರೆನೇಡ್ ಸ್ಫೋಟ: 1 ಸಾವು, 14 ಮಂದಿ ಗಾಯ

ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next