Advertisement

1,200 ರೂ.ಗೆ ಸೇಹಿತನನ್ನೇ ಕೊಂದರು..!

02:49 PM Jan 06, 2022 | Team Udayavani |

ಬೆಂಗಳೂರು: ಹಣದ ವಿಚಾರವಾಗಿ ಸ್ನೇಹಿತರೇ ಯುವಕನೊಬ್ಬನನ್ನು ಕೊಲೆಗೈದಿರುವ ಘಟನೆ ಘಟನೆ ಕೋಣನಕುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಎ.ಕೆ.ಕಾಲೋನಿ ನಿವಾಸಿ ಮೆಹಬೂಬ್‌ ಜಲಿಲ್ಲಾ (19) ಕೊಲೆಯಾದ ಯುವಕ.  ಕೃತ್ಯ ಎಸಗಿದ ಸಂಬಂಧ ನಾಲ್ಕು ಯುವಕರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

ಮಂಗಳವಾರ ರಾತ್ರಿ 8 ಗಂಟೆ ಸಮಯದಲ್ಲಿ 1,200 ರೂ. ಕೊಡುವ ವಿಚಾರವಾಗಿ ಪರಿಚಿತ ಯುವಕರ ನಡುವೆ ಜಗಳ ನಡೆದು ಮೆಹಬೂಬ್‌ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದ್ದು, ಆತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಚಿಕಿತ್ಸೆ ಫ‌ಲಕಾರಿಯಾಗದೆ ಬುಧವಾರ ಮಧ್ಯಾಹ್ನ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿರುವ ಮೆಹಬೂಬ್‌ ಜಲಿಲ್ಲಾ, ಸ್ಥಳೀಯ ನಿವಾಸಿ ಲಲಿತ್‌ ಕುಮಾರ್‌ ಎಂಬಾತನ ಜತೆ ಹೆಚ್ಚು ಓಡಾಡುತ್ತಿದ್ದ. ಮಂಗಳವಾರ ರಾತ್ರಿ ಲಲಿತ್‌ ಕುಮಾರ್‌ ಹಾಗೂ ಮಣಿಕಂಠ ಎಂಬುವರ ನಡುವೆ 1,200 ರೂ. ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಈ ವೇಳೆ ಲಲಿತ್‌ ಕುಮಾರ್‌ ಬಣದಲ್ಲಿದ್ದ ಮೆಹಬೂಬ್‌ ಮಧ್ಯ ಪ್ರವೇಶಿಸಿ ಜಗಳ ಬಿಡಿಸಲು ಹೋಗಿ, ಮಣಿಕಂಠನ ಕಡೆಯ ಕೆಲ ಯುವಕರ ಮೇಲೆ ಹಲ್ಲೆ ನಡೆಸಿದ್ದಾನೆ. ಅದರಿಂದ ಆಕ್ರೋಶಗೊಂಡ ಮಣಿ ಕಂಠ, ಪವನ್‌, ಕಿರಣ್‌, ಕಾರ್ತಿಕ್‌ ಹಾಗೂ ಇತರರ ಮೆಹಬೂಬ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಮೆಹಬೂಬ್‌ನನ್ನು ಕೂಡಲೇ ಆಸ್ಪತ್ರೆ ದಾಖಲಿಸಲಾಗಿತ್ತು.

ಇದನ್ನೂ ಓದಿ:ಶ್ರೀರಂಗಪಟ್ಟಣ: ಮೊಬೈಲ್ ತಂದ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿ ಕೂಡಿ ಹಾಕಿದ ಶಿಕ್ಷಕಿ

ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ನಾಲ್ವರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಕೋಣನ ಕುಂಟೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next