Advertisement

ಜೈಲಿನಿಂದ ಹೊರ ಬಂದವ ಸ್ನೇಹಿತರಿಂದ ಹೆಣವಾದ!

12:38 PM May 27, 2023 | Team Udayavani |

ಮಹದೇವಪುರ: ಇತ್ತೀಚೆಗೆ ಜೈಲಿನಿಂದ ಬಂದಿದ್ದ ಆರೋಪಿಯನ್ನು ಸ್ನೇಹಿತರೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಹದೇವಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ರಾಗ ಅಪಾರ್ಟ್‌ಮೆಂಟ್‌ ಬಳಿ ನಡೆದಿದೆ.

Advertisement

ಪ್ರಶಾಂತ್‌, ಶ್ರೀಕಾಂತ್‌, ವಸಂತ ಕುಮಾರ್‌ ಬಂಧಿತರು. ರೇಣುಕುಮಾರ್‌ (24) ಕೊಲೆಯಾದವ.

ರೇಣುಕುಮಾರ್‌ ವಿರುದ್ಧ ಕೊಲೆ ಯತ್ನ, ರಾಬರಿ, ಹಲ್ಲೆ ಸೇರಿದಂತೆ ಏಳು ಪ್ರಕರಣಗಳು ದಾಖಲಾಗಿದ್ದವು. ಇತ್ತೀಚೆಗೆ ಜೈಲಿ ನಿಂದ ಹೊರ ಬಂದಿದ್ದ ರೇಣು ಕುಮಾರ್‌, ನೀವು ನನ್ನ ಜತೆಗೆ ಇರಬೇಕೆಂದು ಶ್ರೀಕಾಂತ್‌ ಮತ್ತು ಪ್ರಶಾಂತ್‌ಗೆ ಬೆದರಿಕೆ ಹಾಕಿದ್ದ. ನೀವು ಒಬ್ಬೊಬ್ಬರೇ ಏನಾದರೂ ಕೆಲಸ ಮಾಡಿದರೆ ನಿಮ್ಮನ್ನು ನಾನು ಬಿಡುವುದಿಲ್ಲ ಎಂದು ಹೆದರಿಸುತ್ತಿದ್ದ. “ಜೈಲಿಗೆ ಹೋಗಿ ಬಂದಿದ್ದೇನೆ ನಾನೇ ನಿಮಗೆಲ್ಲ ಬಾಸ್‌’ ಎಂದು ಇಬ್ಬರು ಸ್ನೇಹಿತರಿಗೂ ಬೆದರಿಸುತ್ತಿದ್ದ. ಗುರುವಾರ (ಮೇ 25) ಸಹ ಶ್ರೀಕಾಂತ್‌ ಮತ್ತು ಪ್ರಶಾಂತ್‌ಗೆ ರೇಣುಕುಮಾರ್‌ ಧಮ್ಕಿ ಹಾಕಿದ್ದ. ಇದರಿಂದ ಸಿಟ್ಟಿಗೆದ್ದ ಇವರಿಬ್ಬರು, ರೇಣು ಕುಮಾರ್‌ ಬದುಕಿದ್ದರೆ ನಮ್ಮನ್ನು ಹೊಡೆದು ಮುಗಿಸಿ ಬಿಡುತ್ತಾನೆ. ಹೀಗಾಗಿ ನಾವೇ ಆತನನ್ನು ಹತ್ಯೆ ಮಾಡಿ ಮುಗಿಸಿಬಿಡೋಣ ಎಂದು ಸಂಚು ರೂಪಿಸಿದ್ದರು.

ಸಹಾಯಕ್ಕಾಗಿ ಬಂಗಾರಪೇಟೆ ಮೂಲದ ಗೆಳೆಯ ವಸಂತ್‌ನನ್ನು ಜತೆಗೆ ಸೇರಿಸಿ ಕೊಂಡಿದ್ದರು. ಗುರುವಾರ ರೇಣು ಕುಮಾರ್‌ನನ್ನು ತಾವಿದ್ದಲ್ಲಿಗೆ ಕರೆಸಿಕೊಂಡು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next