Advertisement

ಲಕ್ಷ್ಮಿ ವಾರದ ನಿಮ್ಮ ರಾಶಿಫಲ : ಯಾರಿಗೆ ಶುಭ ಯಾರಿಗೆ ಲಾಭ

07:35 AM Aug 20, 2021 | Team Udayavani |

ಮೇಷ: ಪಾಲುದಾರಿಕಾ ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಸಫ‌ಲತೆ, ಸಮೃದ್ಧಿ. ನೂತನ ಮಿತ್ರರ ಸಮಾಗಮ. ಉತ್ತಮ ಧನಾರ್ಜನೆ. ಬಂಧುಬಳಗದವರಿಂದ ಪ್ರೋತ್ಸಾಹ, ಸಂತೋಷ ವೃದ್ಧಿ. ಮನೆಯಲ್ಲಿ ಸಂಭ್ರಮದ ವಾತಾವರಣ.

Advertisement

ವೃಷಭ: ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿದಾಯಕ ಬದಲಾವಣೆ. ಧನಾರ್ಜನೆ ಉತ್ತಮವಾಗಿದ್ದರೂ ಪರರಿಗೆ ಸಹಾಯ ಮಾಡು ವಾಗ ಎಚ್ಚರಿಕೆ ವಹಿಸಿ. ಎಲ್ಲಾ ಪರಿಶ್ರಮಕ್ಕೆ ಬಂಧುಮಿತ್ರರ ಸಹಕಾರ.

ಮಿಥುನ: ಉದ್ಯೋಗ ವ್ಯವಹಾರ ಗಳಲ್ಲಿ ಹೆಚ್ಚಿನ ಜವಾಬ್ದಾರಿ ಪರಿಶ್ರಮದಿಂದ ದೇಹಾಯಾಸ ಕಂಡೀತು. ಮಾನಸಿಕ ಆರೋಗ್ಯ, ಸುದೃಢತೆಯಿಂದ ಎಲ್ಲ ವ್ಯವಹಾರಗಳಲ್ಲಿ ಗುರಿ ಸಾಧಿಸಿದ ತೃಪ್ತಿ. ಸಾಂಸಾರಿಕ ಸುಖ ತೃಪ್ತಿದಾಯಕ.

ಕರ್ಕ: ಗೃಹೋಪಕರಣ ವಸ್ತುಗಳ ಸಂಗ್ರಹ. ಗೃಹದಲ್ಲಿ ಸಂತಸದ ವಾತಾವರಣ. ಬಂಧುಮಿತ್ರರ ಸಮಾಗಮ. ಉದ್ಯೋಗ ವ್ಯವಹಾರಗಳಲ್ಲಿ ತೃಪ್ತಿ. ನಾನಾ ರೀತಿಯ ಚಟುವಟಿಕೆಗಳಿಂದ ಕೂಡಿದ ದಿನ.

ಸಿಂಹ: ದೈಹಿಕ ಮಾನಸಿಕ ಆರೋಗ್ಯ ಸುದೃಢ. ಧನಾರ್ಜನೆ ಸ್ಥಿರ. ಅನ್ಯರಿಗೆ ಹಣ ನೀಡುವುದಿದ್ದರೆ ಸರಿಯಾದ ದಾಖಲಾತಿಗಳೊಂದಿಗೆ ವ್ಯವಹರಿಸಿ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ ಕೂಡಿಬರುವುದು.

Advertisement

ಕನ್ಯಾ: ಆರೋಗ್ಯದಲ್ಲಿ ಸುಧಾರಣೆ. ನಿರೀಕ್ಷೆಗೂ ಮೀರಿದ ಧನಾರ್ಜನೆ. ಉತ್ತಮ ವಾಕ್‌ ಚತುರತೆ ಸಂದರ್ಭಕ್ಕೆ ಸರಿ  ಯಾಗಿ ನಿಪುಣತೆಯ ನಿರ್ಣಯ. ಭೂಮಿ ಆಸ್ತಿ ವಿಚಾರ ಗಳಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ.

ತುಲಾ: ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಗೌರವ ಆದರಾದಿ ಸುಖ. ಪರಸ್ಪರ ಸಹಕಾರ. ಸಹೋದ್ಯೋಗಿಗಳಿಂದ ಪ್ರೋತ್ಸಾಹ, ಹೆಚ್ಚಿನ ಧನಲಾಭ. ಆಸ್ತಿ ವಾಹನಾದಿ ವಿಚಾರ ಗಳಲ್ಲಿ ಎಚ್ಚರಿಕೆಯ ನಡೆ ಅಗತ್ಯ. ಗುರುಹಿರಿಯರಿಂದ ಸಂತೋಷ ವೃದ್ಧಿ.

ವೃಶ್ಚಿಕ: ದೀರ್ಘ‌ ಪ್ರಯಾಣದಿಂದ ದೇಹಾಯಾಸ ಸಂಭವ. ಗುರುಹಿರಿಯರ ಆರೋಗ್ಯದ ಬಗ್ಗೆ ಗಮನಿಸಿ. ಧನಾರ್ಜನೆಯಲ್ಲಿ ಪ್ರಗತಿ. ಸಹೋದ್ಯೋಗಿಗಳೊಂದಿಗೆ ವೈಷಮ್ಯಕ್ಕೆ ಅವಕಾಶ ನೀಡದಿರಿ. ದಾಂಪತ್ಯ ತೃಪ್ತಿದಾಯಕ.

ಧನು: ಆರೋಗ್ಯ ಸುದೃಢ. ದೂರದ ವ್ಯವಹಾರಗಳಲ್ಲಿ ಅನಿರೀಕ್ಷಿತ ಅಭಿವೃದ್ಧಿ. ಗುರುಹಿರಿಯರ, ಮೇಲಧಿಕಾರಿಗಳ, ಗಣ್ಯರ ಸಹಕಾರ ಪ್ರೋತ್ಸಾಹ. ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯ. ದಾಂಪತ್ಯ ತೃಪ್ತಿದಾಯಕ.

ಮಕರ: ಸಣ್ಣ ಪ್ರಯಾಣ ಸಂಭವ. ಸಮಾಜದಲ್ಲಿ ಗೌರವ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಜವಾಬ್ದಾರಿಯುತ ಬದಲಾವಣೆ. ಬಂಧುಮಿತ್ರರೊಂದಿಗೆ ಚರ್ಚೆಗೆ ಅವಕಾಶ ನೀಡದಿರಿ. ನಿರೀಕ್ಷಿತ ಧನಾರ್ಜನೆ.

ಕುಂಭ: ಹಣಕಾಸಿನ ವಿಚಾರದಲ್ಲಿ ಅಪೇಕ್ಷಿಸಿದಂತೆ ಉತ್ತಮ ಪ್ರತಿಫ‌ಲ. ವಾಕ್‌ ಚತುರತೆಯಿಂದ ಕೂಡಿದ ಕಾರ್ಯವೈಖರಿ. ದಂಪತಿಗಳಲ್ಲಿ ಪರಸ್ಪರ ಸಹಕಾರ ಪ್ರೋತ್ಸಾಹ. ವಿದ್ಯಾರ್ಥಿಗಳಿಗೆ ದೂರ ಸಂಚಾರ ಸಂಭವ ಹಾಗೂ ಪರಿಶ್ರಮ.

ಮೀನ: ನಿರೀಕ್ಷಿತ ಸ್ಥಾನ ಗೌರವಾದಿ ಸುಖ ಪ್ರಾಪ್ತಿ. ಆರೋಗ್ಯ ವೃದ್ಧಿ. ಹಣಕಾಸಿನ ವಿಚಾರದಲ್ಲಿ ಸರಿಯಾದ ದಾಖಲಾತಿಗಳೊಂದಿಗೆ ವ್ಯವಹರಿಸಿ. ಸಾಲಬಾಧೆಗೆ ಒಳಗಾಗದಂತೆ ಎಚ್ಚರಿಕೆ ಇರಲಿ. ಮಾತಿನಲ್ಲಿ ದಾಕ್ಷಿಣ್ಯತೆ ತೋರದಿರಿ.

Advertisement

Udayavani is now on Telegram. Click here to join our channel and stay updated with the latest news.

Next