ಪಿರಿಯಾಪಟ್ಟಣ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಇಂದನ ಸಚಿವರಾಗಿದ್ಧಾಗ ಉಚಿತ ವಿದ್ಯುತ್ ನೀಡದೆ ರೈತರ ಪಂಪ್ಸೆಟ್ಗಳಿಗೆ 10 ಸಾವಿರ ದಂಡ ಹಾಕಿದ ಕಾಂಗ್ರೆಸಿಗರು ಈಗ ಉಚಿತ ವಿದ್ಯುತ್ ವಿತರಣೆ ಮಾತನಾಡುತ್ತಿದ್ಧಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ಕಟೀಲ್ ತಿಳಿಸಿದರು.
ತಾಲೂಕಿನ ಚಿಟ್ಟೆನಹಳ್ಳಿ ಗ್ರಾಮದಲ್ಲಿ ಬೂತ್ಕಮಿಟಿ ವಿಜಯಸಂಕಲ್ಪಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ಗೆ ಈಗ ಉಚಿತ ವಿದ್ಯುತ್ ನೀಡುವುದಾಗಿ ಹೇಳುತ್ತಿದೆ ಆದರೆ ಅಧಿಕಾರದಲ್ಲಿ ಇದ್ದಾಗ ರೈತರಿಗೆ ಅನ್ಯಾಯ ಮಾಡಿದೆ, ದಲಿತ ಮುಖ್ಯಮಂತ್ರಿ ಮಾಡಲು ಹೊರಟಾಗ ವಿರೋಧಿಸಿದ ಪಕ್ಷದವರು ಈತ ದಲಿತಮುಖ್ಯಮಂತ್ರಿ, ಎಸ್ಸಿಎಸ್ಟಿ ಮೀಸಲಾತಿ ನೆನಪಾಗುತ್ತಿದೆ. ಹೀಗೆ ಯಾವುದೆ ಅಜೆಂಡಾ ಇಲ್ಲದ ಪಕ್ಷಗಳ ನಡುವೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಅಮೀತ್ಶಾ ಮಂಡ್ಯದ ನೆಲದಲ್ಲಿ ಘೋಷಣೆ ಮಾಡಿದ ಮೇಲೆ ರಾಜ್ಯದಲ್ಲಿ ಸಂಚಲನ ಆರಂಭವಾಗಿದ್ದು ಹಳೇ ಮೈಸೂರು ಭಾಗದಲ್ಲಿ ಈಭಾರಿ ಬಿಜೆಪಿ ಹೆಚ್ಚಿನ ಶಾಸಕರನ್ನು ಕಾಣಲಿದೆ, ಈಗಾಗಲೆ ಹಾಸನ, ಮೈಸೂರು ಭಾಗದಲ್ಲಿ ಸಿದ್ದತೆಗಳು ಆರಂಭವಾಗಿವೆ ಎಂದು ತಿಳಿಸಿದರು.
ಶಾಸಕ ವಿಫಲ
ಪಿರಿಯಾಪಟ್ಟಣದ ಶಾಸಕರು ಬಿಜೆಪಿ ಸರಕಾರದ ಯೋಜನೆಗಳನ್ನು ಜಾರಿಗೆ ತರುವಲ್ಲಿ ವಿಫಲರಾಗಿದ್ದು ಮುಂದಿನದಿನಗಳಲ್ಲಿ ಪಿರಿಯಾಪಟ್ಟಣದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಇದಕ್ಕೆ ಕಾರ್ಯಕರ್ತರು ಶ್ರಮವಹಿಸಿ ದುಡಿಯಬೇಕಿದೆ. ಆತ್ಮನಿರ್ಭರಭಾರತ, ಕಿಸಾನ್ಸಮ್ಮಾನ್, ಆಯುಷ್ಮಾನ್ ಮುಂತಾದ ಯೋಜನೆಗಳ ಮೂಲಕ ಜನರಿಗೆ ಬಿಜೆಇ ಅನೇಕ ಯೋಜನೆಗಳನ್ನುನೀಡಿದೆ ಎಂದರು.
ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ಮಾತನಾಡಿ ಯಾತ್ರೆಗಳಲ್ಲಿ ಅಭಿಯಾನಗಳಲ್ಲಿ ಭೂತ್ಮಟ್ಟದಲ್ಲಿ ಕಾರ್ಯಕರ್ತರನ್ನು ಮತದಾರರನ್ನು ಸೃಷ್ಟಿಸಿ ಮುಂದೆ ನಡೆಯಲಿರುವ ವಿಧಾನಸಭಾ ಚುನಾವಣೆಯ ಸಮರಕ್ಕೆ ಎಲ್ಲರೂ ಸಜ್ಜಾಗಬೇಕು. ಪ್ರತಿಲೋಕಸಭೆಯಲ್ಲಿಯೂ ನನಗೆ ಮೂರುಬಾರಿಯೂ ಹೆಚ್ಚಿನ ಮತನೀಡಿರುವ ಪಿರಿಯಾಪಟ್ಟಣ ಮತದಾರರು ಈಬಾರಿ ತಾಲೂಕಿನಲ್ಲಿ ಕಲಮ ಅರಳಿಸಲಿದ್ದಾರೆ ಎಂದು ತಿಳಿಸಿದರು.
Related Articles
ತಾಲೂಕು ಅಧ್ಯಕ್ಷ ರಾಜೇಗೌಡ ಮಾತನಾಡಿ ತಾಲೂಕಿನಲ್ಲಿ ಬಿಜೆಪಿ ಪಕ್ಷದಿಂದ ನೀಡಲಾದ ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಎಲ್ಲಾ ಭೂತ್ ಮಟ್ಟದಲ್ಲಿಯೂ ವಾಟ್ಸ್ಅಪ್ಗ್ರೂಪ್ ಮಾಡಲಾಗಿದ್ದ 50 ಸಾವಿರ ಸದಸ್ಯರನ್ನು ಮಾಡುವ ಗುರಿಹೊಂದಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಜಿಲ್ಲಾಧ್ಯಕ್ಷೆ ಮಂಗಳಸೋಮಶೇಖರ್, ಭೂತ್ ಅಧ್ಯಕ್ಷ ಸಿ.ಕೆ.ಮಂಜುನಾಥ್, ಮಾಜಿ ಶಾಸಕ ಎಚ್.ಸಿ.ಬಸವರಾಜು, ಜಿಲ್ಲಾ ಪ್ರಧಾನಕಾರ್ಯದರ್ಶಿ ಯೋಗಾನಂದ, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ವೀರಭದ್ರ, ಬೆಮ್ಮತ್ತಿ ಚಂದ್ರು, ಮಾಜಿ ತಾ.ಅಧ್ಯಕ್ಷ ಪಿ.ಜೆ.ರವಿ, ಹರೀಶ್, ಕೃಷ್ಣಪ್ರಸಾದ್, ಲಕ್ಷ್ಮಿನಾರಾಯಣ್,ಮುಖಂಡರಾದ ಕೌಲನಹಳ್ಳಿ ಸೋಮಶೇಖರ್, ನಂದಿಪುರ ಲೋಕೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.