Advertisement

ಡಿಸೇಲ್‌ ಹಾಕಿಸಿ ಆಂಬ್ಯುಲೆನ್ಸ್‌ ತೆಗೆದುಕೊಂಡು ಹೋಗಿ

06:58 PM Apr 27, 2021 | Team Udayavani |

ಶಿರಸಿ: ಯಾರೇ ಮೃತರಾದರೂ ಶವ ಸಾಗಾಟಕ್ಕೆ ಆಂಬ್ಯುಲೆನ್ಸ್‌ ರೆಡಿ ಇದೆ. ಕೇವಲ ಡಿಸೇಲ್‌ ಹಾಕ್ಸಿ ಒಯ್ದರಾಯಿತು. ಇಂಥದೊಂದು ವಿಶಿಷ್ಟ ಜನ ಸೇವಾ ಯೋಜನೆಗೆ ಇಲ್ಲಿನ ಸಾರಿಕಾ ಸೇವಾ ಟ್ರಸ್ಟ್‌ ಮುಂದಾಗಿದೆ.

Advertisement

ಇಲ್ಲಿನ ಮಾರಿಕಾಂಬಾ ದೇವಸ್ಥಾನದ ಮುಂಭಾಗದಲ್ಲಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಮಾರಿಕಾಂಬಾ ದೇವಸ್ಥಾನ ಅಧ್ಯಕ್ಷ ವೆಂಕಟೇಶ ನಾಯ್ಕ ಚಾಲನೆ ನೀಡಿ ಇದು ವಿನೂತನ ಪ್ರಯೋಗವಾಗಿದೆ ಎಂದು ಬಣ್ಣಿಸಿದರು.

ಟ್ರಸ್ಟ್‌ನ ಮುಖ್ಯಸ್ಥ ಪಯ್ಯು ಚೌಟಿ ಮಾತನಾಡಿ, ಶವ ಸಾಗಾಟಕ್ಕೆ ನಗರ ಹಾಗೂ ಗ್ರಾಮೀಣ ಭಾಗಕ್ಕೆ ಸಂಪೂರ್ಣ ಉಚಿತವಾಗಿದೆ. ಬೆಂಗಳೂರು, ಮಂಗಳೂರಿನ ತನಕ ಆಂಬ್ಯುಲೆನ್ಸ್‌ ಒಯ್ಯಬೇಕಾದರೆ ಇಂಧನ ಹಾಕಿಕೊಂಡು ಹೋಗಬಹುದು. ಇನ್ನಾವುದೇ ಹಣ ಕೊಡುವ ಅಗತ್ಯ ಇಲ್ಲ.  ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಆಂಬ್ಯುಲೆನ್ಸ ಸೇವೆ ಉಚಿತವಾಗಿದೆ. 9141469601, 9141469611ಗೆ ಕರೆ ಮಾಡಿ ತುರ್ತು ಸಹಾಯಕ್ಕೆ ಬಳಸಿಕೊಳ್ಳಬಹುದು ಎಂದು ತಿಳಿಸಿದರು.

ರಮೇಶ ದುಭಾಶಿ, ಮಂಜು ಶಿರಸಿ, ಕಿರಣ ಚಿತ್ರಗಾರ, ಡಾನಿ ಡಿಸೋಜಾ, ಮಹದೇವ ಚೆಲುವಾದಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next