Advertisement

ಮಂಗಳೂರು: ಹಣ ಮರುಪಾವತಿಸದೆ ವಂಚನೆ; ಸೊಸೈಟಿ ವಿರುದ್ಧ ಪ್ರಕರಣ

08:38 PM Sep 29, 2022 | Team Udayavani |

ಮಂಗಳೂರು: ಹೂಡಿಕೆ ಮಾಡಿದ ಹಣ ಮರುಪಾವತಿ ಮಾಡದೆ ವಂಚಿಸಿರುವ ಬಗ್ಗೆ ಪಂಚವಟಿ ಮಲ್ಟಿಸ್ಟೇಟ್‌ ಕೋ-ಆಪರೇಟಿವ್‌ ಲಿಮಿಟೆಡ್‌ ಸೊಸೈಟಿಯ ಚೇರ್‌ವೆುನ್‌, 7 ಮಂದಿ ನಿರ್ದೇಶಕರು ಮತ್ತು ಮಲ್ಲಿಕಟ್ಟೆ ಶಾಖೆಯ ಮ್ಯಾನೇಜರ್‌ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

ಸೊಸೈಟಿಯಲ್ಲಿ ಉಳಿತಾಯ ಖಾತೆ, ಠೇವಣಿ ಖಾತೆ, ಆರ್‌.ಡಿ ಖಾತೆ, ಪಿಗ್ಮಿà ಹಾಗೂ ಶೇರು ಬಂಡವಾಳದಲ್ಲಿ ಹಣ ಹೂಡಿಕೆ ಮಾಡಿಸಲಾಗಿತ್ತು. ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚು ಲಾಭಾಂಶ ಹಾಗೂ ಕಮಿಷನ್‌ ನೀಡುವ ಭರವಸೆ ಕೊಡಲಾಗಿತ್ತು. ಅಲ್ಲದೆ 5  ವರ್ಷ 9 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ ಎಂದು ಆಶ್ವಾಸನೆ ನೀಡಲಾಗಿತ್ತು. ಆದರೆ ಹೂಡಿಕೆ ಮಾಡಿದ ಹಣದ ಬಾಂಡ್‌ನ‌ ಮೆಚ್ಯೂರಿಟಿ ದಿನಾಂಕ ಮುಗಿದರೂ ಹಣ ಮರುಪಾವತಿಸದೆ ನಂಬಿಕೆ ದ್ರೋಹ ಹಾಗೂ ವಂಚನೆ ಮಾಡಲಾಗಿದೆ ಎಂಬುದಾಗಿ ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next