Advertisement

Mangalore: ಮೀನು ಮಾರಾಟ ಫೆಡರೇಶನ್‌ಗೆ ವಂಚನೆ: ಆರೋಪಿ ಬಂಧನ; ಜೈಲು

12:26 AM Sep 22, 2023 | Team Udayavani |

ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಲಿ.ಗೆ ವಂಚಿಸಿದ ಆರೋಪಿ ಮಂಜುನಾಥ ಖಾರ್ವಿಯನ್ನು ಬಂಧಿಸಲಾಗಿದ್ದು, ಜೈಲು ಶಿಕ್ಷೆ ವಿಧಿಸಲಾಗಿದೆ.

Advertisement

ಮಂಜುನಾಥ ಖಾರ್ವಿ ಶಿಕ್ಷೆಗೊಳಗಾದಾತ. ಈತ ಫೆಡರೇಶನ್‌ನಿಂದ ಮೀನು ಖರೀದಿಸಿದ್ದ. ಅದರ ಹಣವನ್ನು ಪಾವತಿಸಿರಲಿಲ್ಲ. ಅಲ್ಲದೆ ಮೀನು ಮಾರಾಟವಾದ ಕಮಿಷನ್‌ ಕೂಡ ಬಾಕಿಯಿರಿಸಿದ್ದ. ಆತ ನೀಡಿದ ಮೂರು ಚೆಕ್‌ಗಳು ಬೌನ್ಸ್‌ ಆಗಿದ್ದವು. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಲಾಗಿತ್ತು. ಮೂರು ಪ್ರಕರಣಗಳು ದಾಖಲಾಗಿದ್ದವು. ಒಟ್ಟು 88 ಲ.ರೂ. ಪಾವತಿಸುವಂತೆ ಮಂಗಳೂರಿನ 5ನೇ ಜೆಎಂಎಫ್ಸಿ ನ್ಯಾಯಾಲಯವು ತೀರ್ಪು ನೀಡಿತ್ತು.

ಆದರೆ ಆರೋಪಿ ಹಣ ಮರುಪಾವತಿ ಮಾಡಲು ವಿಫಲನಾದ ಹಿನ್ನೆಲೆಯಲ್ಲಿ ವಾರಂಟ್‌ ಜಾರಿ ಮಾಡಲಾಗಿತ್ತು. ಆರೋಪಿಯನ್ನು ಕುಂದಾಪುರ ಪೊಲೀಸರು ಉಪ್ಪುಂದದ ಮನೆಯಲ್ಲಿ ಬಂಧಿಸಿ ಸೆ. 20ರಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ದೂರುದಾರರ ಪರ ಮಂಗಳೂರಿನ ವೆರಿಟಾಸ್‌ ಲೆಗೀಸ್‌ ಅಸೋಸಿಯೇಶನ್‌ನ ರಾಘವೇಂದ್ರ ರಾವ್‌ ಮತ್ತು ಗೌರಿ ಶೆಣೈ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next