Advertisement

ಒಡಿಶಾ: ಇಬ್ಬರು ವೈದ್ಯರಿಗೆ ಲಕ್ಷಾಂತರ ರೂ. ದೋಖಾ

01:18 AM Feb 20, 2021 | Suhan S |

ಕಟಕ್‌ (ಒಡಿಶಾ): ಕಾಲ ತಾಂತ್ರಿಕವಾಗಿ ಬಹಳ ಮುಂದುವರಿದಿದೆ. ಹಾಗೆಯೇ ಅದನ್ನೇ ಬಳಸಿಕೊಂಡು ವಂಚನೆಯೂ ಧಾರಾಳವಾಗಿ ಸಾಗಿದೆ. ಅಚ್ಚರಿಯೆಂದರೆ ಉನ್ನತಮಟ್ಟದ ಶಿಕ್ಷಣ ಪಡೆದ ವೈದ್ಯ, ವಕೀಲ, ಪೊಲೀಸರೂ ಇದಕ್ಕೆ ನಿರಂತರ ವಾಗಿ ಬಲಿಯಾಗುತ್ತಿದ್ದಾರೆ. ಅಂತಹದ್ದೊಂದು ಘಟನೆ ಒಡಿ ಶಾದ ಕಟಕ್‌ನಲ್ಲಿ ನಡೆದಿದೆ.

Advertisement

ವೈದ್ಯ ಡಾ| ಸನಾತನ ಮೊಹಾಂತಿ ಅವರ 77,86,727 ರೂ.ಗಳನ್ನು ಸೈಬರ್‌ ವಂಚಕರು ಎಗರಿಸಿದ್ದಾರೆ. ವೈದ್ಯರಿಗೆ ಕರೆ ಮಾಡಿದ ವಂಚಕರು ಬ್ಲಾಕ್‌ ಆಗಿರುವ ವೈದ್ಯರ ಎಟಿಎಂ ಕಾರ್ಡ್‌ ಅನ್ನು ಮತ್ತೆ ಸಕ್ರಿಯ ಮಾಡಲು, ಬ್ಯಾಂಕ್‌ ಖಾತೆ ವಿವರ, ಎಟಿಎಂ ಕಾರ್ಡ್‌ ಹಿಂದಿನ ಸಿವಿವಿ ಸಂಖ್ಯೆಯನ್ನು ಕೇಳಿದ್ದಾರೆ. ಅದಾಗಿ ಫೆ.9ರಿಂದ 15ರ ವರೆಗೆ ಹಣವನ್ನು ಸದ್ದಿಲ್ಲದೇ ಎಗರಿಸಲಾಗಿದೆ. ಇನ್ನೊಂದು ಕಡೆ ವಿದೇಶಿ ಮೂಲದ ನಕಲಿ ವಿಮಾ ಕಂಪೆನಿಯೊಂದು, ಆಯು  ರ್ವೇದ ವೈದ್ಯರೊಬ್ಬರಿಗೆ 55 ಲಕ್ಷ ರೂ.ಗಳನ್ನು ವಂಚಿಸಿದೆ. 2015ಕ್ಕೂ ಮುನ್ನ ಈ ಕಂಪೆನಿಗೆ 55 ಲಕ್ಷ ರೂ.ಗಳನ್ನು ವಿಮೆಯನ್ನಾಗಿ ಕಟ್ಟಲಾಗಿತ್ತು. ಮುಂದಿನ ಐದು ವರ್ಷಗಳಲ್ಲಿ ಹಣ ದುಪ್ಪಟ್ಟು ಆಗುವುದು ಎಂದು ಭರವಸೆ ನೀಡಲಾಗಿತ್ತು. ಪಾಲಿಸಿ ಅವಧಿ ಮುಗಿದಾಗ ಹಣವನ್ನು ಪಡೆಯಲು ತೆರಳಿದರೆ, ಅಂತಹದ್ದೊಂದು ಕಂಪೆನಿಯೇ ಇಲ್ಲ ಎಂದು ವೈದ್ಯರಿಗೆ ಗೊತ್ತಾಯಿತು. ದಿಗ್ಭ್ರಾಂತರಾಗಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಎರಡೂ ಪ್ರಕರಣಗಳನ್ನು ಒಟ್ಟಿಗೆ ತನಿಖೆ ಮಾಡಲು ಕಟಕ್‌ ಪೊಲೀಸರು ತೀರ್ಮಾನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next