Advertisement

ಖಾತೆಯಿಂದ ಹಣ ನಗದೀಕರಿಸಿ ವಂಚನೆ ನಗರದಲ್ಲಿ ಮತ್ತೂಂದು ಪ್ರಕರಣ

01:42 AM Jan 14, 2021 | Team Udayavani |

ಮಂಗಳೂರು: ಬ್ಯಾಂಕ್‌ವೊಂದರ ಗಾಂಧಿನಗರ ಶಾಖೆಯ ಖಾತೆಯಿಂದ ಖಾತೆದಾರರ ಗಮನಕ್ಕೆ ಬಾರದಂತೆ ಅಪರಿಚಿತರು ಜ.11ರಂದು ರಾತ್ರಿ 9.26ರಿಂದ 9.29ರ ನಡುವೆ ಹಂತ ಹಂತವಾಗಿ ಒಟ್ಟು 40,000 ರೂ.ಗಳನ್ನು ವಿದ್‌ಡ್ರಾ ಮಾಡಿ ವಂಚಿಸಿದ್ದಾರೆ. ಖಾತೆದಾರರು ಈ ಬಗ್ಗೆ ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಜ. 11ರಂದು ಗಾಂಧಿನಗರ, ಉರ್ವಸ್ಟೋರ್‌ ಶಾಖೆಗಳಿಂದ ಇದೇ ರೀತಿ ಹಣ ನಗದೀಕರಿಸಿ ವಂಚಿಸಿರುವ ಬಗ್ಗೆ ಪ್ರತ್ಯೇಕ ಪ್ರಕರಣಗಳು ಈಗಾಗಲೇ ದಾಖಲಾಗಿವೆ. ಈ ಪ್ರಕರಣಗಳಲ್ಲಿ ಅಪರಿಚಿತರು ಅನುಕ್ರಮವಾಗಿ 60 ಮತ್ತು 40 ಸಾವಿರ ರೂ. ವಿದ್‌ಡ್ರಾ ಮಾಡಿದ್ದರು. ಮರುದಿನ ಕುಲಶೇಖರ ಪೋಸ್ಟಲ್‌ ಎಟಿಎಂ ಮೂಲಕ ವ್ಯಕ್ತಿಯೊಬ್ಬರ ಖಾತೆಯಿಂದ 40 ಸಾವಿರ ರೂ. ವಿದ್‌ಡ್ರಾ ಮಾಡಿದ ಘಟನೆ ನಡೆದಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next