Advertisement

ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ಸರಕಾರಿ ನೌಕರರಿಗೆ ವಂಚನೆ : ಇಬ್ಬರ ಬಂಧನ

09:54 PM May 27, 2022 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ಹಲವಾರು ಮಂದಿ ಸರಕಾರಿ ನೌಕರರಿಗೆ ವಂಚನೆ ಎಸಗುತ್ತಿದ್ದ ಇಬ್ಬರನ್ನು ಪೊಲೀಸರ ತಂಡ ಶುಕ್ರವಾರ ಹಾಸನದಲ್ಲಿ ಬಂಧಿಸಿದ್ದಾರೆ.

Advertisement

ಬಂಧಿತ ಆರೋಪಿಗಳು ಚಿಕ್ಕೋಡಿಯ ಸದಲಗದ ಮುರಿಗೆಪ್ಪಾ ನಿಂಗಪ್ಪ ಕುಂಬಾರ(56) ಮತ್ತು ಸಕಲೇಶಪುರದ ಮುಗುಳಿ ಗ್ರಾಮದ ರಜನಿಕಾಂತ್(46) ಎನ್ನುವವರಾಗಿದ್ದಾರೆ.

ಮುರಿಗೆಪ್ಪಾ ವಿರುದ್ಧ ರಾಜ್ಯದ ವಿವಿಧೆಡೆ 40ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ತಿಳಿದು ಬಂದಿದೆ. ರಜನಿಕಾಂತ್ ವಿರುದ್ಧ ೬ ಪ್ರಕರಣಗಳು ದಾಖಲಾಗಿವೆ.

ಇಬ್ಬರೂ ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ಸರಕಾರಿ ನೌಕರರಿಗೆ ಕರೆ ಮಾಡಿ ಬೆದರಿಸಿ ಖಾತೆಗಳಿಗೆ ಹಣ ಹಾಕಿಸಿಕೊಳ್ಳುವ ದಂಧೆಯಲ್ಲಿ ನಿರತರಾಗಿದ್ದರು. ಇಬ್ಬರ ವಿರುದ್ಧ ಅಧಿಕಾರಿಗಳು ದೂರು ಸಲ್ಲಿಸಿದ್ದರು.

ಇದನ್ನೂ ಓದಿ : ಪಿಎಸ್‌ಐ ಅಕ್ರಮ-ಎಡಿಜಿಪಿ ಅಮೃತ್‌ಪೌಲ್‌ ವಿಚಾರಣೆಗೆ ಗೈರು

Advertisement
Advertisement

Udayavani is now on Telegram. Click here to join our channel and stay updated with the latest news.

Next