Advertisement

28 ಲ.ರೂ. ಮೌಲ್ಯದ ಗೋಡಂಬಿ ಪೂರೈಸದೆ ವಂಚನೆ: ದೂರು

12:03 AM Aug 03, 2022 | Team Udayavani |

ಮಂಗಳೂರು: ಮಂಗಳೂರು ಬಂದರಿನಿಂದ ಮಹಾರಾಷ್ಟ್ರಕ್ಕೆ ಸುಮಾರು 28 ಲ.ರೂ. ಮೌಲ್ಯದ 25.586 ಮೆಟ್ರಿಕ್‌ ಟನ್‌ ಗೋಡಂಬಿ ಪೂರೈಕೆ ಮಾಡದೆ ವಂಚಿಸಲಾಗಿದೆ ಎಂದು ರಮಾಕಾಂತ್‌ ವಸಂತ ಅವರು ಮಂಗಳೂರು ಉತ್ತರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಜು. 7ರಂದು ಪಶ್ಚಿಮ ಆಫ್ರಿಕಾದಿಂದ ಬಂದರಿಗೆ ಕಚ್ಚಾ ಗೋಡಂಬಿ ಬಂದಿದ್ದು ಅದನ್ನು ಆಂಜಲ್‌ ಟ್ರಾನ್ಸ್‌ಪೊರ್ಟ್‌ ಮೂಲಕ ಜು. 25ರಂದು ಲಾರಿಯಲ್ಲಿ ತುಂಬಿಸಿ ಮಹಾರಾಷ್ಟ್ರದ ಸಿಂದುದುರ್ಗ ಜಿಲ್ಲೆಗೆ ಜು. 27ರಂದು ತಲುಪಿಸಬೇಕಾಗಿತ್ತು. ಆದರೆ ಗೋಡಂಬಿ ತಲುಪಿಸದೆ ವಂಚಿಸಲಾಗಿದೆ ಎಂದವರು ದೂರಿನಲ್ಲಿ ತಿಳಿಸಿದ್ದಾರೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next