Advertisement

ಟಿಡಿಪಿಗೆ ರಾಜ್ಯಾಘಾತ :ನಾಲ್ವರು ತೆಲುಗು ದೇಶಂ ಸಂಸದರು ಬಿಜೆಪಿಗೆ ಸೇರ್ಪಡೆ

09:11 AM Jun 22, 2019 | Team Udayavani |

ಹೊಸದಿಲ್ಲಿ: ಲೋಕಸಭೆ, ಆಂಧ್ರಪ್ರದೇಶ ವಿಧಾನ ಸಭೆ ಚುನಾವಣೆಯಲ್ಲಿ ಸೋತಿರುವ ಟಿಡಿಪಿಗೆ ಮತ್ತೂಂದು ಆಘಾತ ಉಂಟಾಗಿದೆ.

Advertisement

ರಾಜ್ಯಸಭೆಯಲ್ಲಿರುವ ಆ ಪಕ್ಷದ 6 ಸದಸ್ಯರ ಪೈಕಿ ನಾಲ್ವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ವೈ.ಎಸ್‌.ಚೌಧರಿ, ಸಿ.ಎಂ. ರಮೇಶ್‌, ಗರಿಕಪೋವಟಿ ಮೋಹನ ರಾವ್‌, ಟಿ.ಜಿ. ವೆಂಕಟೇಶ್‌ ತತ್‌ಕ್ಷಣದಿಂದ ಜಾರಿಗೆ ಬರುವಂತೆ ಈ ನಿರ್ಧಾರ ಕೈಗೊಂಡಿರುವುದಾಗಿ ರಾಜ್ಯಸಭೆ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ಗುರುವಾರ ಲಿಖೀತವಾಗಿ ಸಲ್ಲಿಸಿರುವ ಮನವಿಯಲ್ಲಿ ಅರಿಕೆ ಮಾಡಿಕೊಂಡಿದ್ದಾರೆ. ಈ ಸಂದರ್ಭ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಕೂಡ ಉಪಸ್ಥಿತರಿದ್ದರು.

ಬಳಿಕ ಮಾತನಾಡಿದ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯಸಭೆಯಲ್ಲಿನ ನಾಲ್ವರು ಟಿಡಿಪಿ ಸಂಸದರು ಪಕ್ಷ ಸೇರ್ಪಡೆ ಆಗುತ್ತಿರುವುದನ್ನು ಮತ್ತು ಅವರನ್ನೊಳ ಗೊಂಡ ಟಿಡಿಪಿ ಘಟಕವನ್ನು ಬಿಜೆಪಿಯಲ್ಲಿ ವಿಲೀನ ಗೊಳಿ ಸುವುದನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.

ಮೋದಿಯಿಂದ ಪ್ರಭಾವಿತ: ಬಿಜೆಪಿ ಪ್ರಧಾನ ಕಚೇರಿ ಯಲ್ಲಿ ಮಾತನಾಡಿದ ವೈ.ಎಸ್‌. ಚೌಧರಿ, “ದೇಶದ ಅಭಿ ವೃದ್ಧಿಗೆ ಏನಾದರೂ ಕೊಡುಗೆ ನೀಡಬೇಕು ಎಂಬ ಕಾರಣ ದಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಿಂದ ಪ್ರಭಾವಿತರಾಗಿದ್ದೇವೆ’ ಎಂದು ಹೇಳಿದ್ದಾರೆ.

Advertisement

ಬಿಜೆಪಿ ಬಲ: 245 ಸದಸ್ಯ ಬಲ ಇರುವ ರಾಜ್ಯಸಭೆಯಲ್ಲಿ ಗುರುವಾರ ಬೆಳವಣಿಗೆಯಿಂದಾಗಿ ಬಿಜೆಪಿ ಸದ್ಯ71 ಸಂಸದರನ್ನು ಹೊಂದಿದೆ. ಎನ್‌ಡಿಎ ಮೈತ್ರಿಕೂಟದ ಸಂಖ್ಯೆ 102ಕ್ಕೆ ವೃದ್ಧಿಸಲಿದೆ. ಇದರ ಜತೆಗೆ ದಕ್ಷಿಣ ಭಾರತದಲ್ಲಿ ಕರ್ನಾಟಕದ ಬಳಿಕ ಆಂಧ್ರಪ್ರದೇಶದಲ್ಲಿಯೂ ಬಿಜೆಪಿಯ ಬಲವೃದ್ಧಿಗೆ ಇದು ನೆರವಾಗಲಿದೆ.

ಸಂವಿಧಾನ ಪ್ರಕಾರ ಹೇಗೆ?
ಸಂವಿಧಾನದ ಹತ್ತನೇ ಷೆಡ್ನೂಲ್‌ನಲ್ಲಿ ಪ್ರಸ್ತಾಪಿಸಿರುವಂತೆ, ನಿಗದಿತ ರಾಜಕೀಯ ಪಕ್ಷದ ಸಂಸದರು ಮತ್ತೂಂದು ಪಕ್ಷಕ್ಕೆ ಸೇರ್ಪಡೆಯಾಗುವುದಿದ್ದರೆ ಅವರ ಸದಸ್ಯತ್ವ ಅನರ್ಹಗೊಳಿಸುವಂತೆ ಇಲ್ಲ. ಒಟ್ಟು ಸದಸ್ಯರ ಪೈಕಿ 3ನೇ ಎರಡರಷ್ಟು ಸದಸ್ಯರು ಸೇರ್ಪಡೆ ಬಗ್ಗೆ ಸಮ್ಮತಿ ಸೂಚಿಸಿ ದರೆ, ಆ ವಿಲೀನಕ್ಕೆ ಮಾನ್ಯತೆ ಸಿಗುತ್ತದೆ. ಟಿಡಿಪಿಯ ನಾಲ್ವರು ಸಂಸದರು ರಾಜ್ಯ ಸಭೆ ಸಭಾಪತಿಗೆ ನೀಡಿದ ಪತ್ರ ದಲ್ಲಿಯೂ ಇದೇ ಅಂಶ ಉಲ್ಲೇಖೀಸಿದ್ದಾರೆ.

ಸಂಸದರಿಗೆ ಪ್ರಧಾನಿಯಿಂದ ಔತಣಕೂಟ
ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ದಿಲ್ಲಿಯ ಸರಕಾರಿ ಸ್ವಾಮ್ಯದ ಪಂಚತಾರಾ ಹೊಟೇಲ್‌ನಲ್ಲಿ ಗುರುವಾರ ರಾತ್ರಿ ಲೋಕಸಭೆ ಹಾಗೂ ರಾಜ್ಯಸಭೆಯ ಎಲ್ಲ ಸಂಸದರಿಗೂ ಔತಣಕೂಟ ಏರ್ಪ ಡಿಸಿ ದ್ದರು. ಸುಮಾರು 750 ಸಂಸದರನ್ನು ಆಹ್ವಾನಿಸಲಾಗಿತ್ತು. ಹೊಟೇಲ್‌ ಅಶೋಕಾ ದಲ್ಲಿ ನಡೆದ ಔತಣಕೂಟದಲ್ಲಿ ರಾಜ್ಯಸಭೆ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್‌, ಡಿಎಂಕೆಯ ಕನಿಮೋಳಿ, ಆಪ್‌ನ ಸಂಜಯ್‌ ಸಿಂಗ್‌ ಸೇರಿದಂತೆ ಅನೇಕ ಸಂಸದರು ಪಾಲ್ಗೊಂಡಿದ್ದರು.

ಬಿಕ್ಕಟ್ಟು ನಮಗೆ ಹೊಸದಲ್ಲ: ಚಂದ್ರಬಾಬು ನಾಯ್ಡು
ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಯುರೋಪ್‌ನಲ್ಲಿ ಕುಟುಂಬ ಸದಸ್ಯರ ಜತೆಗೆ ಪ್ರವಾಸ ಕೈಗೊಂಡಿರುವಾಗಲೇ ಈ ಬೆಳವಣಿಗೆ ನಡೆದಿದೆ. ವಿಚಾರ ತಿಳಿದೊಡನೆ, ಪಕ್ಷದ ಹಿರಿಯ ನಾಯಕರೊಂದಿಗೆ ದೂರವಾಣಿ ಮೂಲಕ ನಾಯ್ಡು ಮಾತುಕತೆ ನಡೆಸಿದ್ದಾರೆ. ಜತೆಗೆ, ಪಕ್ಷಕ್ಕೆ ಇಂಥ ಆಘಾತಗಳು ಹಾಗೂ ಬಿಕ್ಕಟ್ಟುಗಳು ಹೊಸತಲ್ಲ. ನಮ್ಮ ರಾಜ್ಯದ ಹಿತಾಸಕ್ತಿ ಕಾಪಾಡುವ ಏಕೈಕ ಉದ್ದೇಶದಿಂದ ನಾವು ಬಿಜೆಪಿ ವಿರುದ್ಧ ಹೋರಾಡಿದ್ದೇವೆ. ಆದರೆ ಪಕ್ಷವನ್ನು ದುರ್ಬಲಗೊಳಿಸುವ ಬಿಜೆಪಿ ಪ್ರಯತ್ನವನ್ನು ಖಂಡಿಸುತ್ತೇನೆ ಹೇಳಿದ್ದಾರೆ.

ಡಿಎಂಕೆ ಸಂಸದರಿಂದ ಕಾವೇರಿ ವಿಚಾರ ಪ್ರಸ್ತಾಪ
ಗುರುವಾರ ರಾಷ್ಟ್ರಪತಿ ಭಾಷಣದ ಮಧ್ಯೆಯೇ ಡಿಎಂಕೆ ಸಂಸದರು ಕಾವೇರಿ ನೀರನ್ನು ಸರಿಯಾದ ರೀತಿಯಲ್ಲಿ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫ‌ಲಕಗಳನ್ನು ಹಿಡಿದಿದ್ದ ಸಂಸದರು ಘೋಷಣೆಯನ್ನೂ ಕೂಗಿದ್ದಾರೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಸಮಾಧಾನಪಡಿಸಿ ಕುಳ್ಳಿರಿಸುವ ಪ್ರಯತ್ನವನ್ನೂ ಮಾಡಿದರು.

10 ಸುಗ್ರೀವಾಜ್ಞೆಗಳ ಮಂಡನೆ: ಹದಿನಾರನೇ ಲೋಕಸಭೆ ಅವಧಿಯಲ್ಲಿ ಮಂಡಿಸಲಾಗಿದ್ದ 10 ಸುಗ್ರೀವಾಜ್ಞೆಗಳನ್ನು ಮತ್ತೆ ಮಂಡಿಸಲಾಗಿದೆ. ಇತ್ತೀಚೆಗೆ ನಡೆದಿದ್ದ ಕೇಂದ್ರ ಸಂಪುಟ ಸಭೆಯಲ್ಲಿ ಕಾನೂನಾಗಿ ಮಾರ್ಪಾಡುಗೊಳ್ಳದೇ ಇರುವ 10 ಸುಗ್ರೀವಾಜ್ಞೆಗಳಿಗೆ ಮತ್ತೂಮ್ಮೆ ಅನುಮೋದನೆ ನೀಡಿ, ಹೊಸತಾಗಿ ಮಂಡಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.

ಭರವಸೆ ಹುಸಿ: ದೊಡ್ಡ ಆಶ್ವಾಸನೆಗಳನ್ನು ನೀಡಿ, ಜನರಲ್ಲಿ ನಿರೀಕ್ಷೆಗಳನ್ನು ಹುಟ್ಟುಹಾಕಿ, ಕೊನೆಗೆ ಅದನ್ನು ಸುಳ್ಳಾಗಿ ಸುವುದರಲ್ಲಿ ಬಿಜೆಪಿ ದಾಖಲೆ ಮಾಡಿದೆ. ಇದಕ್ಕೆ ಮತ್ತೂಂದು ಉದಾಹರಣೆಯಾಗಿ ಇಂದಿನ ರಾಷ್ಟ್ರಪತಿಯವರ ಭಾಷಣ ಕೂಡ ಸೇರುತ್ತದೆ ಎಂದು ಕಾಂಗ್ರೆಸ್‌ ಹೇಳಿದೆ.

ಉತ್ತರಾಧಿಕಾರಿಯ ನಿರ್ಧಾರ ಪಕ್ಷಕ್ಕೆ ಬಿಟ್ಟಿದ್ದು: ರಾಹುಲ್‌
ಲೋಕಸಭೆ ಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಹುಲ್‌ ಗಾಂಧಿ ಅವರು ತಮ್ಮ ಪಟ್ಟು ಸಡಿಲಿಸುವ ಲಕ್ಷಣ ಗೋಚರಿಸುತ್ತಿಲ್ಲ. ಅವರ ಉತ್ತರಾಧಿಕಾರಿಯ ಕುರಿತು ಗುರು ವಾರ ವರದಿಗಾರರು ಕೇಳಿದ ಪ್ರಶ್ನೆಗೆ ಪ್ರತಿ ಕ್ರಿಯಿಸಿದ ರಾಹುಲ್‌, “ನನ್ನ ಉತ್ತರಾಧಿಕಾರಿ ಯಾರೆಂದು ನಿರ್ಧರಿಸು ವುದು ಪಕ್ಷವೇ ಹೊರತು ನಾನಲ್ಲ’ ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಗೆಹೊÉàಟ್‌ ಅವರು ನಿಮ್ಮ ಉತ್ತರಾಧಿಕಾರಿಯಾಗುತ್ತಾರೆ ಹಾಗೂ ಅದಕ್ಕೆ ನೀವು ಸಮ್ಮತಿಸಿದ್ದೀರಿ ಎಂಬ ವರದಿಗಳು ನಿಜವೇ ಎಂಬ ಪ್ರಶ್ನೆಗೆ ರಾಹುಲ್‌, “ಇಲ್ಲ’ ಎಂದು ಉತ್ತರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next