Advertisement

ಕುಮಟಾ: ಪ್ರವಾಸಕ್ಕೆ ಬಂದು ಈಜಲು ತೆರಳಿದ್ದ ನಾಲ್ವರು ನೀರುಪಾಲು; ಇಬ್ಬರ ಶವ ಪತ್ತೆ

05:58 PM Jun 25, 2022 | Team Udayavani |

ಕುಮಟಾ: ಪ್ರವಾಸಕ್ಕೆ ಬಂದು ಈಜಲು ತೆರೆಳಿದ್ದ ನಾಲ್ವರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಕಾಗಲ್ ಕಡಲ ತೀರದಲ್ಲಿ ಶನಿವಾರ ( ಜೂ.25 ರಂದು) ನಡೆದಿದೆ.

Advertisement

ಅರ್ಜುನ್ ಹಾಗೂ ಚೈತ್ರಶ್ರೀ ಮೃತ ದೇಹ ಪತ್ತೆಯಾಗಿದ್ದು, ತೇಜಸ್ ಡಿ., ಕಿರಣ್ ಕುಮಾರ್ ಸಮುದ್ರದಲ್ಲಿ  ಕಣ್ಮರೆಯಾಗಿದ್ದಾರೆ.

ಬೆಂಗಳೂರಿನಿಂದ ಪ್ರವಾಸಕ್ಕೆಂದು ಬಂದಿದ್ದ 87 ಮಂದಿ ವಿದ್ಯಾರ್ಥಿಗಳಲ್ಲಿ ಕೆಲವರು ಸಿಲ್ವರ್ ಸ್ಯಾಂಡ್ ರೆಸಾರ್ಟ್ ನ ಬಳಿಯಿರುವ ಕಾಗಲ್‌ ಸಮುದ್ರಕ್ಕಿಳಿದು ಆಟವಾಡುತ್ತಿದ್ದರು. ಈ ವೇಳೆ ನಾಲ್ವರು ನೀರು ಪಾಲಾಗಿದ್ದಾರೆ.

ಸ್ಥಳಕ್ಕೆ ಕುಮಟಾ ಠಾಣೆ ಪೊಲೀಸರು,  ಅಗ್ನಿಶಾಮಕ ದಳ ಸಿಬ್ಬಂದಿಗಳು  ಆಗಮಿಸಿ ಸ್ಥಳೀಯರೊಂದಿಗೆ ಶೋಧಕಾರ್ಯ ನಡೆಸಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next