Advertisement

ಇಂದು ತೆರೆ ಕಾಣುತ್ತಿದೆ ನಾಲ್ಕು ಚಿತ್ರಗಳು

09:38 AM Apr 29, 2022 | Team Udayavani |

ಒಂದೆಡೆ ಬೇಸಿಗೆ ರಜೆ ಎದುರಾಗುತ್ತಿದ್ದರೆ, ಮತ್ತೂಂದೆಡೆ ಪ್ರೇಕ್ಷಕರನ್ನು ರಂಜಿಸಲು ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳೂ ರೆಡಿಯಾಗುತ್ತಿವೆ. ಈ ವಾರ ಕನ್ನಡದಲ್ಲಿ “ಶೋಕಿವಾಲಾ’, “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’, “ಮೇಲೋಬ್ಬ ಮಾಯಾವಿ’ ಮತ್ತು “ರಾಜಿ’ ಎಂಬ ನಾಲ್ಕು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಲವ್‌, ರೊಮ್ಯಾನ್ಸ್‌, ಆ್ಯಕ್ಷನ್‌, ಸೆಂಟಿಮೆಂಟ್‌, ಸಸ್ಪೆನ್ಸ್‌, ಥ್ರಿಲ್ಲರ್‌, ಫ್ಯಾಮಿಲಿ ಎಂಟರ್‌ಟೈನ್ಮೆಂಟ್‌ ಹೀಗೆ ಎಲ್ಲ ಥರದ ವೆರೈಟಿ ಕಂಟೆಂಟ್‌ ಇರುವ ಈ ಸಿನಿಮಾಗಳ ಹೈಲೈಟ್ಸ್‌ ಇಲ್ಲಿದೆ.

Advertisement

ಖಾತೆದಾರರ ಕಥೆಯಿದು…

ಸುಮಾರು 7 ವರ್ಷಗಳ ಬಳಿಕ ತಾರಾಜೋಡಿ ದಿಗಂತ್‌, ಐಂದ್ರಿತಾ ರೇ ತೆರೆಮೇಲೆ ಒಟ್ಟಿಗೆ ಕಾಣಿಸಿಕೊಂಡಿರುವ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರ ಇಂದು (ಏ. 29) ತೆರೆ ಕಾಣುತ್ತಿದೆ. ಚಿತ್ರದಲ್ಲಿ ರಂಜನಿ ರಾಘವನ್‌ ಮತ್ತೂಬ್ಬ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವಿನಾಯಕ ಕೋಡ್ಸರ ನಿರ್ದೇಶನದ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರವನ್ನು ನಿರ್ಮಾಪಕ ಎ. ಮಂಜು (ಸಿಲ್ಕ್ ಮಂಜು) “ಉಪ್ಪಿ ಎಂಟರ್‌ಟೈನರ್’ ಬ್ಯಾನರ್‌ನಲ್ಲಿ ನಿರ್ಮಿಸಿದ್ದಾರೆ.

ಚಿತ್ರದ ಬಗ್ಗೆ ಮಾತನಾಡುವ ನಿರ್ಮಾಪಕ ಸಿಲ್ಕ್ ಮಂಜು, “ಇಂದಿನ ಮಲೆನಾಡಿನ ಚಿತ್ರಣ ಈ ಸಿನಿಮಾದಲ್ಲಿದೆ. ಮಲೆನಾಡಿನ ಸಂಸ್ಕೃತಿ, ಭಾಷೆ, ಸೊಗಡು, ಸೊಬಗು, ಸಂಪ್ರದಾಯ, ಬದುಕು, ಪ್ರಸ್ತುತ ಸನ್ನಿವೇಶಗಳು ಎಲ್ಲವನ್ನೂ ಮನರಂಜನಾತ್ಮಕವಾಗಿ ಈ ಸಿನಿಮಾದಲ್ಲಿ ಹೇಳಲಾಗಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆ ಹತ್ತಾರು ಅಂಶಗಳು ಸಿನಿಮಾದಲ್ಲಿದೆ’ ಎನ್ನುತ್ತಾರೆ. “ನಾವು ಸಿನಿಮಾದ ಬಗ್ಗೆ ಹೆಚ್ಚು ಮಾತನಾಡುವುದಕ್ಕಿಂತ ಸಿನಿಮಾ ಬಿಡುಗಡೆಯಾದ ಬಳಿಕ ಪ್ರೇಕ್ಷಕರೇ ಮಾತನಾಡುತ್ತಾರೆ’ ಎಂಬುದು ನಿರ್ದೇಶಕ ವಿನಾಯಕ ಕೋಡ್ಸರ ವಿಶ್ವಾಸದ ಮಾತು. “ಮಧ್ಯಮ ವರ್ಗದ ಜನರ ಬಳಿ ತಿಂಗಳ ಕೊನೆಗೆ ದುಡ್ಡು ಉಳಿದಿರುವಿದಿಲ್ಲ. ಈ ವಿಷಯ ಇಟ್ಟುಕೊಂಡು ಮಾಡಿದ ಸಿನಿಮಾವಿದು’ ಎನ್ನುವುದು ದಿಗಂತ್‌ ಮಾತು.

ತೆರೆ ಮೇಲೆ ಮಾಯಾವಿ ದರ್ಶನ

Advertisement

ಇತ್ತೀಚೆಗಷ್ಟೇ ಸಂಚಾರಿ ವಿಜಯ್‌ ಅಭಿನಯಿಸಿದ್ದ “ತಲೆದಂಡ’ ಚಿತ್ರ ತೆರೆಕಂಡಿತ್ತು. ಮೂರೇ ವಾರದ ಅಂತರದಲ್ಲಿ ಸಂಚಾರಿ ವಿಜಯ್‌ ಅಭಿನಯದ ಮತ್ತೂಂದು ಚಿತ್ರ “ಮೇಲೊಬ್ಬ ಮಾಯಾವಿ’ ಇಂದು (ಏ. 29) ತೆರೆ ಕಾಣುತ್ತಿದೆ. ಅಂದಹಾಗೆ, “ಮೇಲೋಬ್ಬ ಮಾಯಾವಿ’ ಥಿಯೇಟರ್‌ನಲ್ಲಿ ತೆರೆಕಾಣುತ್ತಿರುವ ಸಂಚಾರಿ ವಿಜಯ್‌ ಕೊನೆಯ ಚಿತ್ರವಾಗಿದ್ದು, “ಶ್ರೀ ಕಟೀಲ್‌ ಸಿನಿಮಾಸ್‌’ ಬ್ಯಾನರ್‌ನಲ್ಲಿ ಭರತ್‌ ಕುಮಾರ್‌ ಮತ್ತು ತನ್ವಿ ಅಮಿನ್‌ ಕೊಲ್ಯ ನಿರ್ಮಿಸಿರುವ “ಮೇಲೊಬ್ಬ ಮಾಯಾವಿ ಚಿತ್ರಕ್ಕೆ ಬಿ. ನವೀನ್‌ ಕೃಷ್ಣ ನಿರ್ದೇಶನವಿದೆ.

ಕನ್ನಡದಲ್ಲಿ ಇದೇ ಮೊದಲ ಬಾರಿಗೆ “ಮೇಲೊಬ್ಬ ಮಾಯಾವಿ’ ಸಿನಿಮಾದ ಮೂಲಕ ತೆರೆಮೇಲೆ ಪಶ್ಚಿಮ ಘಟ್ಟದಲ್ಲಿ ನಿರಂತರವಾಗಿ ನಡೆಯುವ ಹರಳು ಮಾಫಿಯಾದ ಅನಾವರಣವಾಗತ್ತಿದೆ. ಉಂಗುರ, ಆಭರಣಗಳಿಗೆ ಬಳಸುವ ಅಪರೂಪದ ಹರಳಿನ ಕಲ್ಲಿಗಾಗಿ ದಶಕಗಳಿಂದ ನಡೆಯುತ್ತಿರುವ ಅಕ್ರಮ ದಂಧೆಕೋರರ ಹುಡುಕಾಟ, ಅದರ ಹಿಂದಿನ ಸಾವು-ನೋವುಗಳ ಅಸಲಿ ಸತ್ಯ, ಪರಿಸರ ನಾಶದ ಕರಾಳ ಕೃತ್ಯಗಳ ಸುತ್ತ ಇಡೀ ಚಿತ್ರ ಸಾಗುತ್ತದೆ.

 ‘ಶೋಕಿವಾಲ’ನ ಕಲರ್‌ ಫುಲ್‌ ಎಂಟ್ರಿ

ಅಜೇಯ್‌ ರಾವ್‌ ನಟನೆಯ “ಶೋಕಿವಾಲ’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡು, ಟ್ರೇಲರ್‌ ಹಿಟ್‌ ಆಗಿದೆ. ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌ ಆಗಿ ಗಮನ ಸೆಳೆಯುತ್ತಿದೆ. ಚಿತ್ರದಲ್ಲಿ ಅಜೇಯ್‌ ರಾವ್‌ ಲವರ್‌ ಬಾಯ್‌ ಹಾಗೂ ಆ್ಯಕ್ಷನ್‌ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡದ ಮೊಗದಲ್ಲಿ ನಗುಮೂಡಿದೆ.

ಇದನ್ನೂ ಓದಿ:ಬಾಲಿವುಡ್‌ ಮೇಲೆ  ಸೌತ್‌ ಸವಾರಿ

ಇನ್ನು, ಚಿತ್ರದ ಹಾಡೊಂದರಲ್ಲಿ ಕನ್ನಡ ಚಿತ್ರರಂಗದ ನಿರ್ದೇಶಕರಾದ ರವಿ ಬಸ್ರೂರ್‌, ನಂದಕಿಶೋರ್‌, ಹರಿ ಸಂತೋಷ್‌, ಶಶಾಂಕ್‌, ವಿ.ನಾಗೇಂದ್ರ ಪ್ರಸಾದ್‌ ಹೆಜ್ಜೆ ಹಾಕಿದ್ದಾರೆ. ಈ ಹಾಡನ್ನು ಚೇತನ್‌ ಕುಮಾರ್‌ ಬರೆದಿದ್ದು, ಶಶಾಂಕ್‌ ಶೇಷಗಿರಿ ಹಾಡಿದ್ದಾರೆ. ಶ್ರೀಧರ್‌.ವಿ.ಸಂಭ್ರಮ್‌ ಸಂಗೀತ ಸಂಯೋಜಿಸಿದ್ದಾರೆ. ಕುಟುಂಬ ಸಮೇತ ಕುಳಿತು ನೋಡುವ ಸಿನಿಮಾ ವಾಗಿದ್ದು, ಎಲ್ಲರು ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂಬುದು ನಿರ್ಮಾಪಕ ಟಿ.ಆರ್‌. ಚಂದ್ರಶೇಖರ್‌ ಮಾತು. ಅಜೇಯ್‌ ರಾವ್‌ ಅವರಿಗೆ ನಾಯಕಿಯಾಗಿ ಸಂಜನಾ ಆನಂದ್‌ ನಟಿಸಿದ್ದಾರೆ. ಶರತ್‌ ಲೋಹಿತಾಶ್ವ, ಅರುಣಾ ಬಾಲರಾಜ್‌, ತಬಲಾ ನಾಣಿ, ನಾಗರಾಜ ಮೂರ್ತಿ ನಟಿಸಿದ್ದಾರೆ.

ಸುಖ ಸಂಸಾರದ ರಾಜಿ

ಹಿರಿಯ ನಟ ರಾಘವೇಂದ್ರ ರಾಜಕುಮಾರ್‌ ಹಾಗೂ ಪ್ರೀತಿ ಎಸ್‌. ಬಾಬು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ “ರಾಜಿ’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಪ್ರೀತಿ ಎಸ್‌. ಬಾಬು ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸುಂದರ ಸಂಸಾರದ ಸುತ್ತ ಸಾಗುವ ಕಥೆಯನ್ನು ಈ ಸಿನಿಮಾ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next