Advertisement

ನಾಲ್ವರು ಡಿಸಿಎಂಗಳಿಗೆ ಒಲಿದ CM ಯೋಗ

11:52 PM May 20, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಇದುವರೆಗೆ 11 ಮಂದಿ ಉಪ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ್ದು ಅವರಲ್ಲಿ ನಾಲ್ವರಿಗೆ ಮುಖ್ಯಮಂತ್ರಿಯಾಗಿ ರಾಜ್ಯದ ಅಧಿಕಾರ ನಡೆಸುವ ಯೋಗ ಒಲಿದಿದೆ. ಡಿಸಿಎಂ ಆಗಿ ನೇಮಕಗೊಂಡವರು ಸಿಎಂ ಆಗಿ ನೇಮಕಗೊಳ್ಳುವುದು ಸಹಜ ಆಯ್ಕೆಯೇನೂ ಅಲ್ಲ. ಆದರೆ ಅವರ ಸಾಮರ್ಥ್ಯ, ಚುನಾವಣ ಫ‌ಲಿತಾಂಶ, ಅದೃಷ್ಟದ ಮೇಲೆ ಈ ಹುದ್ದೆ ನಿಂತಿದೆ.

Advertisement

ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಡಿಸಿಎಂ ಹುದ್ದೆ ಸೃಷ್ಟಿಯಾಗಿದ್ದು 1994ರಲ್ಲಿ. ಎಂ.ವೀರಪ್ಪ ಮೊಲಿ ಹಾಗೂ ಎಸ್‌.ಎಂ.ಕೃಷ್ಣ ನಡುವೆ ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದ್ದರಿಂದ ಮೊಲಿ ಸಿಎಂ, ಎಸ್‌.ಎಂ.ಕೃಷ್ಣ ಉಪ ಮುಖ್ಯಮಂತ್ರಿ­ಯಾದರು. ಅನಂತರ 1999 ರಿಂದ 2004ರ ವರೆಗೂ ಕೃಷ್ಣ ಅವರು ಸಿಎಂ ಆಗಿ ರಾಜ್ಯಭಾರ ನಡೆಸಿದರು.
ಎಚ್‌.ಡಿ.ದೇವೇಗೌಡರ ಸಂಪುಟದಲ್ಲಿ ಉಪ ಮುಖ್ಯಮಂತ್ರಿ (1994 ರಿಂದ 1996) ಆಗಿದ್ದ ಜೆ.ಎಚ್‌.ಪಟೇಲ್‌ ಅವರು, ದೇವೇಗೌಡರು ಪ್ರಧಾನಿಯಾದ ಬಳಿಕ ಅವರು 1996 ರಿಂದ 1999ರ ವರೆಗೆ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದರು.

ದೇವೇಗೌಡರು ಪ್ರಧಾನಿಯಾದ ಅನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಜೆ.ಎಚ್‌. ಪಟೇಲ್‌ ಹಾಗೂ ಸಿದ್ದರಾಮಯ್ಯ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಒಕ್ಕಲಿಗ, ಲಿಂಗಾಯತ, ಕುರುಬ ಕಾಂಬಿನೇಶನ್‌ನಡಿ ಪಕ್ಷಕ್ಕೆ ಬಹುಮತ ಬಂದಿದ್ದರಿಂದ ಒಕ್ಕಲಿಗರ ಬಳಿಕ ಲಿಂಗಾಯತರಿಗೆ ಆ ಸ್ಥಾನ ಬಿಟ್ಟುಕೊಡುವುದು ಸೂಕ್ತ, ಹೆಚ್ಚಿನ ಸಂಖ್ಯೆಯ ಶಾಸಕರೂ ಬೆಂಬಲಕ್ಕಿದ್ದಾರೆ ಎಂಬ ವಾದದಡಿ ಜೆ.ಎಚ್‌.ಪಟೇಲ್‌ಗೆ ಸಿಎಂ ಪಟ್ಟ ಒಲಿಯಿತು.

ಅನಂತ ರ‌ ಸಿದ್ದರಾಮಯ್ಯ ಅವರನ್ನು ಸಮಾ ಧಾನಪಡಿ­ಸಲು ಉಪ ಮುಖ್ಯಮಂತ್ರಿ ಸ್ಥಾನ ನೀಡ­ಲಾಯಿತು. ಸಿದ್ದರಾಮಯ್ಯ ಅವರು ಜೆ.ಎಚ್‌. ಪಟೇಲ್‌ ಸಂಪುಟದಲ್ಲಿ (1996ರಿಂದ 1999) ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದರು.

ಇದಾದ ಅನಂತರ 2004ರಲ್ಲಿ ಕಾಂಗ್ರೆಸ್‌ಗೆ ಬಹುಮತ ಬಾರದಿದ್ದಾಗ ಜೆಡಿಎಸ್‌ ಜತೆ ಸೇರಿ ಸರಕಾರ ರಚಿಸಲಾಯಿತು. ಆಗ ಜೆಡಿಎಸ್‌ಗೆ ಸಿಎಂ ಸ್ಥಾನ ಪಡೆಯಬೇಕು ಎಂದು ಸಿದ್ದರಾಮಯ್ಯ ಹಠ ಹಿಡಿದರು. ಆದರೆ ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕಾದಾಗ ಸಿದ್ದರಾಮಯ್ಯ ಅವರಿಗೆ ಡಿಸಿಎಂ ಹುದ್ದೆ ನೀಡಿ ಸಮಾಧಾನ ಪಡಿಸಲಾಯಿತು. ಧರಂಸಿಂಗ್‌ ಸಂಪುಟದಿಂದ ಸಿದ್ದರಾಮಯ್ಯ ಅವರನ್ನು ತೆಗೆದು, ಬದ ಲಿಗೆ ಎಂ.ಪಿ. ಪ್ರಕಾಶ್‌ ಅವರನ್ನು ಡಿಸಿಎಂ ಮಾಡಲಾಯಿತು.

Advertisement

2013ರಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬಹುಮತ ಬಂದಿದ್ದರಿಂದ ವಿಪಕ್ಷ ನಾಯಕರಾಗಿದ್ದ ಸಿದ್ದ ರಾಮಯ್ಯ ಮುಖ್ಯಮಂತ್ರಿಯಾಗಿ ಆಯ್ಕೆ­ಯಾಗಿ 2018ರ ವರೆಗೆ ಆಡಳಿತ ನಡೆಸಿದರು. ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ| ಜಿ.ಪರಮೇಶ್ವರ್‌ ಚುನಾವಣೆ ಯಲ್ಲಿ ಸೋತಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಲು ಅವಕಾಶ ದೊರೆಯಿತು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ­ದ್ದಾಗ ಡಿಸಿ ಎಂ ಹುದ್ದೆ ಸೃಷ್ಟಿಯ ಬೇಡಿಕೆ ಇತ್ತಾದರೂ ಅದು ಸಾಧ್ಯವಾಗಿರಲಿಲ್ಲ. ಇದೀಗ ಸಿದ್ದರಾಮಯ್ಯ 2ನೇ ಬಾರಿಗೆ ಸಿದ್ದರಾಮಯ್ಯ ಅವರು ಸಿಎಂ ಆಗಿ ನೇಮಕಗೊಂಡಿದ್ದಾರೆ.

ಈ ನಡುವೆ, ಬಿಜೆಪಿ ವಿಚಾರಕ್ಕೆ ಬಂದರೆ ಬಿ.ಎಸ್‌. ಯಡಿಯೂರಪ್ಪ ಅವರು, ಎಚ್‌.ಡಿ. ಕುಮಾರ ಸ್ವಾಮಿ ಸಂಪುಟದಲ್ಲಿ (2006- 2007) ಡಿಸಿ ಎಂ ಆಗಿದ್ದರು. ಅನಂತರ ಬಿ.ಎಸ್‌. ಯಡಿಯೂರಪ್ಪ 2007ರ ನವೆಂಬರ್‌ 12ರಿಂದ ನ.19ರ ವರೆಗೆ 7 ದಿನ ಸಿಎಂ ಹಾಗೂ 2008 ರ ಮೇ ನಿಂದ 2011ರ ಆಗಸ್ಟ್‌ವರೆಗೆ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದರು. ಮತ್ತೆ ಯಡಿಯೂರಪ್ಪ ಅವರು 2018ರ ಮೇ 17 ರಿಂದ ಮೇ 23ರ ವರೆಗೆ ಅಂದರೆ 6 ದಿನ ಸಿಎಂ ಆಗಿದ್ದರು. ಆದರೆ ಯಡಿಯೂರಪ್ಪ ಅವರು ಆಪರೇಷನ್‌ ಕಮಲದ ಮೂಲಕ 2019ರಿಂದ 2021ರ ವರೆಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು.

ಈ ನಡುವೆ 2018ರಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ, ಡಾ| ಜಿ. ಪರಮೇಶ್ವರ್‌ ಅವರು ಡಿಸಿಎಂ ಆಗಿ ಸೇವೆ ಸಲ್ಲಿಸಿದರು. ಆದರೆ ಇವರಿಗೆ ಸಿಎಂ ಯೋಗ ಲಭಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next