Advertisement

Zoo ಒಳಗೆ ನುಗ್ಗಿ 4 ಕೃಷ್ಣಮೃಗಗಳನ್ನು ಕೊಂದ ಬೀದಿನಾಯಿಗಳು!

09:59 PM Jan 07, 2021 | Team Udayavani |

ಪುಣೆ: ಬೀದಿನಾಯಿಗಳು ಝೂ ಒಳಗೆ ನುಸುಳಿ ದಾಳಿಗೈದ ಪರಿಣಾಮ 4 ಕೃಷ್ಣಮೃಗಗಳು ಸಾವನ್ನಪ್ಪಿದ್ದು, ಒಂದು ಕೃಷ್ಣಮೃಗಕ್ಕೆ ಗಂಭೀರ ಗಾಯವಾದ ಘಟನೆ ಇಲ್ಲಿನ ರಾಜೀವ್‌ ಗಾಂಧಿ ಝೂಲಾಜಿಕಲ್‌ ಪಾರ್ಕ್‌ನಲ್ಲಿ ನಡೆದಿದೆ.

Advertisement

ವನ್ಯಜೀವಿ ಸಂರಕ್ಷಣಾ ಕಾಯ್ದೆ- ಶೆಡ್ನೂಲ್‌ 1ರ ಅನ್ವಯ ಕೃಷ್ಣ ಮೃಗಗಳನ್ನು ಸಂರಕ್ಷಿಸಲು ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಿದೆ. ಇವುಗಳನ್ನು ಸೆರೆಹಿಡಿಯುವುದು, ಬೇಟೆಯಾಡುವುದನ್ನೂ ನಿಷೇಧಿಸಲಾಗಿದೆ. ರಾಜೀವ್‌ ಗಾಂಧಿ ಝೂನಲ್ಲಿ ಕೃಷ್ಣಮೃಗಗಳ ಆವಾಸದ ಸ್ಥಳಕ್ಕೆ ಭದ್ರ ಬೇಲಿಯನ್ನೂ ಹಾಕಲಾಗಿದೆ.

ಆದರೆ, ಕೆಲವು ಬೀದಿನಾಯಿಗಳು ಆಕಸ್ಮಿಕವಾಗಿ ಝೂ ಒಳಗೆ ನುಗ್ಗಿ ಈ ಅನಾಹುತ ಸೃಷ್ಟಿಸಿವೆ. “ಕೃಷ್ಣಮೃಗಗಳು ತುಂಬಾ ನಾಚಿಕೆಯ ಪ್ರಾಣಿಗಳು. ಬೀದಿನಾಯಿಗಳ ದಾಳಿಗೆ ಬೆಚ್ಚಿ 2 ಗಂಡು, 2 ಹೆಣ್ಣು ಕೃಷ್ಣಮೃಗಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ’ ಎಂದು ಝೂ ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಗೊಳಗಾದ ಕೃಷ್ಣಮೃಗಗಳ ಆಕ್ರಂದನ ಕೇಳಿಸುತ್ತಿದ್ದಂತೆಯೇ ಝೂ ಗಾರ್ಡ್‌ಗಳು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ನಾಯಿಗಳನ್ನು ಓಡಿಸಿದ್ದಾರೆ. ಝೂ ಆವರಣದಲ್ಲಿ ಒಂದು ಕಡೆ ಕಾಮಗಾರಿ ನಡೆಯುತ್ತಿದ್ದು, ಆ ಭಾಗದಿಂದ ನಾಯಿಗಳು ಒಳ ನುಸುಳಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜೀವ್‌ ಗಾಂಧಿ ಝೂನಲ್ಲಿ ಒಟ್ಟು 30 ಕೃಷ್ಣಮೃಗಗಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next