Advertisement

ಕೊಳ್ಳೇಗಾಲ: ಕಾರಿನಲ್ಲಿ ಅಕ್ರಮವಾಗಿ ಆನೆದಂತ ಸಾಗಾಟ; ನಾಲ್ವರ ಬಂಧನ,ಕಾರು ವಶಕ್ಕೆ

01:26 PM Jun 13, 2022 | Team Udayavani |

ಕೊಳ್ಳೇಗಾಲ: ಚಿಕ್ಕಮಂಗಳೂರಿನಿಂದ ಕೊಳ್ಳೇಗಾಲಕ್ಕೆ  ಕಾರಿನಲ್ಲಿ ಅಕ್ರಮವಾಗಿ ಆನೆದಂತಗಳನ್ನು ಸಾಗಿಸುತ್ತಿದ್ದ ನಾಲ್ವರನ್ನು ಅರಣ್ಯ ಸಿ.ಐ.ಡಿ. ಪೋಲೀಸರು ತಾಲ್ಲೂಕಿನ ಸತ್ತೇಗಾಲ ಹ್ಯಾಂಡ್‌ ಪೋಸ್ಟ್ ನಲ್ಲಿ ಸೋಮವಾರ ಬಂಧಿಸಿದ್ದಾರೆ

Advertisement

ಚಿಕ್ಕಮಂಗಳೂರಿನ ಪ್ರೀತಮ್ (31) , ಜಗದೀಶ್ (21), ಪುನೀತ್ (28),  ಹೇಮಂತ್ (26) ಬಂಧಿತ ಆರೋಪಿಗಳು.

ಕಾರಿನಲ್ಲಿ ಉದ್ದನೆಯ ಎರಡು ಆನೆ ದಂತವನ್ನು ಚಿಕ್ಕಮಗಳೂರಿನಿಂದ ಕೊಳ್ಳೇಗಾಲಕ್ಕೆ ಸಾಗಿಸುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಸಿ.ಐ.ಡಿ. ಪೋಲೀಸ್ ಪಿ ಎಸ್.ಐ. ಆನಂದ್ ಕುಮಾರ್ ನೇತೃತ್ವದ ತಂಡ ಕಾದು ಕುಳಿತು ಸರಿಯಾದ ಸಮಯಕ್ಕೆ ಕಾರು ಬರುತ್ತಿದಂತೆ ಅಡ್ಡಗಟ್ಟಿ ಕಾರಿನಲ್ಲಿದ್ದ 15 ಕೆ.ಜಿ. 900 ಗ್ರಾಂ ಆನೆ ದಂತ ಮತ್ತು ಕಾರನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮುಗಿಯಿತಾ ಮುನಿಸು? ದೂರ ಉಳಿದಿದ್ದ ಪರಮೇಶ್ವರ್, ಜಮೀರ್ ಪ್ರತ್ಯಕ್ಷ

ಈ ಕುರಿತು ಪ್ರಕರಣ ದಾಖಲಿಸಿರುವ ಪೋಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ದಾಳಿಯಲ್ಲಿ ಸಿಬಂದಿಗಳಾದ ಶಂಕರ್ ಟಕಿ ಉಲ್ಲಾ, ಬಸವರಾಜ, ರಾಮಚಂದ್ರ, ಸ್ವಾಮಿ, ಪ್ರಭಕರ್ ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next