Advertisement

ಶಿಕ್ಷೆ ಅನುಭವಿಸುತ್ತಿರುವ ಈ ಕೈದಿಗಿದೆ ತಿಹಾರ್‌ ಜೈಲಿನೊಳಗೇ ರಹಸ್ಯ ಕಚೇರಿ!

08:40 AM Aug 27, 2021 | Team Udayavani |

ಹೊಸದಿಲ್ಲಿ: ಹೂಡಿಕೆದಾರರಿಗೆ ವಂಚಿಸಿದ ಆರೋಪಕ್ಕೆ ಗುರಿ ಯಾಗಿ, ತಿಹಾರ್‌ ಜೈಲಲ್ಲಿ ಶಿಕ್ಷೆ ಅನುಭವಿಸುತ್ತಿರುವ ಯುನಿಟೆಕ್‌ ಲಿಮಿಟೆಡ್‌ ಸಂಸ್ಥಾಪಕ ರಮೇಶ್‌ ಚಂದ್ರ ಜೈಲಲ್ಲಿಯೇ ರಹಸ್ಯ ಕಚೇರಿ ಹೊಂದಿದ್ದರು

Advertisement

. ಅಲ್ಲಿಗೆ ಅವರ ಪುತ್ರರಾ ಗಿರುವ ಸಂಜಯ ಚಂದ್ರ, ಅಜಯ ಚಂದ್ರ ಅವರು ಭೇಟಿ ನೀಡಿದ್ದರು ಎಂದು ಜಾರಿ ನಿರ್ದೇಶನಾಲಯ ಸುಪ್ರೀಂ ಕೋರ್ಟ್‌ಗೆ ಅರಿಕೆ ಮಾಡಿಕೊಂಡಿದೆ. ಹೀಗಾಗಿ, ರಮೇಶ್‌ ಚಂದ್ರನನ್ನು ಮುಂಬಯಿಯ ಆರ್ಥರ್‌ ರಸ್ತೆಯಲ್ಲಿರುವ ಜೈಲಿಗೆ ವರ್ಗಾಯಿ ಸು ವಂತೆ ನ್ಯಾ| ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾ| ಎಂ.ಆರ್‌.ಶಾ ಅವರನ್ನೊಳಗೊಂಡ ನ್ಯಾಯಪೀಠ ಆದೇಶ ನೀಡಿದೆ.

ಕೇಂದ್ರ ತನಿಖಾ ಸಂಸ್ಥೆ ಇ.ಡಿ.ಯ ಪರವಾಗಿ ವಾದಿಸಿದ ಹೆಚ್ಚು ವರಿ ಸಾಲಿಸಿಟರ್‌ ಜನರಲ್‌ ಮಾಧವಿ ದಿವಾನ್‌ ನ್ಯಾಯ ಪೀಠಕ್ಕೆ ಈ ಆಘಾತಕಾರಿ ಅಂಶವನ್ನು ಅರಿಕೆ ಮಾಡಿಕೊಂಡರು.

ರಮೇಶ್‌ ಚಂದ್ರ ತನ್ನ ಆಪ್ತ ವರ್ಗದ ಕೆಲವರನ್ನು ಜೈಲಿನ ಹೊರಗೆ ನಿಯೋಜಿಸಿ, ತನ್ನ ಸಲಹೆ- ಸೂಚನೆಗಳನ್ನು ಹೊರಗಿನ ಪ್ರಪಂಚಕ್ಕೆ ತಿಳಿಸಲು ಏರ್ಪಾಡು ಮಾಡಿದ್ದರು ಎಂದು ಹೇಳಿದ್ದಾರೆ.  ಜೈಲಿನಲ್ಲಿ ಶೋಧ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ರಮೇಶ್‌ಚಂದ್ರ ಹೊಂದಿದ್ದ ರಹಸ್ಯ ಕಚೇರಿ ವಿಚಾರ ಬಹಿರಂಗವಾಯಿತು ಎಂದರು ಹೆಚ್ಚುವರಿ ಸಾಲಿಸಿಟರ್‌ ಜನರಲ್‌. ಅಲ್ಲಿಂದ ಹಲವು ಡಿಜಿಟಲ್‌ ಸಹಿ, ಕಂಪ್ಯೂಟರ್‌ಗಳು, ಸೇಲ್‌ ಡೀಡ್‌ಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next