Advertisement

ಭವಿಷ್ಯ ನುಡಿದು ಉಗಿಸಿಕೊಂಡ ಅಲಿ

02:46 AM Jun 28, 2019 | Sriram |

ಲಂಡನ್‌ : ಪಾಕ್‌ನ ಇನ್ನೋರ್ವ ಮಾಜಿ ಆಟಗಾರ ಬಾಸಿತ್‌ ಅಲಿ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ವಿರುದ್ಧ ಭಾರತ ಆಡಲಿರುವ ಪಂದ್ಯಗಳ ಭವಿಷ್ಯ ನುಡಿದು ಉಗಿಸಿಕೊಂಡಿದ್ದಾರೆ.

Advertisement

ಪಾಕಿಸ್ಥಾನ ಸೆಮಿಫೈನಲ್‌ಗೇರುವುದನ್ನು ತಡೆಯುವ ಸಲುವಾಗಿ ಬಾಂಗ್ಲಾ ಮತ್ತು ಶ್ರೀಲಂಕಾ ವಿರುದ್ಧ ಭಾರತ ಉದ್ದೇಶಪೂರ್ವಕವಾಗಿ ಸೋಲಲಿದೆ ಎಂದು ಹೇಳಿದ್ದಾರೆ ಅಲಿ.ಭಾರತದ ಮಾತ್ರವಲ್ಲದೆ ಪಾಕಿಸ್ಥಾನದ ಕ್ರಿಕೆಟ್‌ ಅಭಿಮಾನಿಗಳು ಕೂಡ ಅಲಿ ಹೇಳಿಕೆಯನ್ನು ಟೀಕಿಸಿದ್ದಾರೆ. ಓರ್ವ ಅಭಿಮಾನಿ “ಈ ಅಲಿಗೆ ಪ್ರತಿ ಪಂದ್ಯದಲ್ಲೂ ಒಂದಲ್ಲ ಒಂದು ರೀತಿಯ ಫಿಕ್ಸಿಂಗ್‌ ಕಾಣಿಸುತ್ತದೆ. ಬಹುಶಃ ಬುಕ್ಕಿಗಳ ಜತೆಗೆ ಅವರು ಖಾಸಾ ಸಂಬಂಧ ಹೊಂದಿರಬೇಕು’ ಎಂದು ಉಗಿದಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next