Advertisement

Jayaprada: “ತಲೆಮರೆಸಿಕೊಂಡ’ ಖ್ಯಾತ ನಟಿ ಜಯಪ್ರದಾ! ಮಾ.6ರ ಒಳಗೆ ಹಾಜರುಪಡಿಸುವಂತೆ ಸೂಚನೆ

09:43 PM Feb 27, 2024 | Team Udayavani |

ನವದೆಹಲಿ: ಖ್ಯಾತ ನಟಿ, ಮಾಜಿ ಸಂಸದೆ, ಬಿಜೆಪಿ ನಾಯಕಿ ಜಯಪ್ರದಾ ಅವರನ್ನು ರಾಂಪುರದ ವಿಶೇಷ ನ್ಯಾಯಾಲಯ “ತಲೆಮರೆಸಿಕೊಂಡಿರುವವರು’ ಎಂದು ಘೋಷಿಸಿದೆ.

Advertisement

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಂಪುರದಿಂದ ಸ್ಪರ್ಧಿಸಿದ್ದ ಜಯಪ್ರದಾ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಎರಡು ಕೇಸ್‌ಗಳು ದಾಖಲಾಗಿದ್ದು ಈ ಪ್ರಕರಣಗಳ ವಿಚಾರಣೆಯನ್ನು ಎಂಪಿ, ಎಂಎಲ್‌ಎಗಳ ನ್ಯಾಯಾಲಯ ನಡೆಸುತ್ತಿದೆ. ಆದರೆ 7 ಬಾರಿ ಜಾಮೀನು ರಹಿತ ವಾರಂಟ್‌ ಹೊರಡಿಸಿದ್ದರೂ ಅವರು ಹಾಜರಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವವರು ಎಂದು ಘೋಷಿಸಿರುವ ನ್ಯಾಯಾಲಯ, ಮಾ.6ರ ಒಳಗೆ ಹಾಜರುಪಡಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next