Advertisement

ಮಾಜಿ ಶಾಸಕರು ಸಣ್ಣತನ ಬಿಡಲಿ: ರಾಮಣ್ಣ

06:07 AM May 16, 2020 | Lakshmi GovindaRaj |

ಮಾಗಡಿ: ಶಾಸಕ ಎ.ಮಂಜುನಾಥ್‌ ಕಾಂಗ್ರೆಸ್‌ ಸೇರಲಿದ್ದಾರೆ ಎಂದು ಹೇಳಿ ಮಾಜಿ ಶಾಸಕ ಎಚ್‌. ಸಿ.ಬಾಲಕೃಷ್ಣ ಸಣ್ಣತನ ತೋರಿಸಿದ್ದಾರೆ. ಅದನ್ನು ಜೆಡಿಎಸ್‌ ತೀವ್ರವಾಗಿ ಖಂಡಿಸುತ್ತೇವೆ ಎಂದು ತಾಲೂಕು ಜೆಡಿಎಸ್‌ ಅಧ್ಯಕ್ಷ ಪೊಲೀಸ್‌  ರಾಮಣ್ಣ ತಿಳಿಸಿದರು. ಪಟ್ಟಣದ ಜೆಡಿಎಸ್‌ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Advertisement

ಮಾಜಿ ಶಾಸಕರು, ಹಾಲಿ ಶಾಸಕರ ತೇಜೋವಧೆ ಮಾಡುವುದನ್ನು ನಿಲ್ಲಿಸಬೇಕು. ಕೊರೊನಾ ನೆಪ ಮಾಡಿಕೊಂಡು ಅವರಿಗೆ ಮತ  ಹಾಕಿರುವವರಿಗೆ ಆಹಾರ ಪದಾರ್ಥಗಳ ಕಿಟ್‌ ಹಂಚಿ ತಮ್ಮ ಮುಂದಿನ ಭವಿಷ್ಯಕ್ಕೆ ಅನುಕೂಲ ಮಾಡಿ  ಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ರಾಜ್ಯ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ ಮಾತನಾಡಿ, ಶಾಸಕ  ಎ.ಮಂಜು ವಿರುದಟಛಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.

ಶಾಸಕರು ಏಕವಚನಲ್ಲಿ ಮಾತನಾಡುವುದಕ್ಕೆ ಮಾಜಿ ಶಾಸಕರೇ ನೇರ ಕಾರಣ. ಬಿಡದಿ ಭಾಗದಲ್ಲಿ 10 ವರ್ಷ ಶಾಸಕರಾಗಿದ್ದ ಮಾಜಿ ಶಾಸಕರು ಸಮಸ್ಯೆ ಬಗೆಹರಿಸಲಿ. ಶಾಸಕರ ಮೇಲೆ ಗೂಬೆ ಕೂರಿಸುವ ಕೆಲಸ ಬಿಡಬೇಕು. ಹೇಗಾದರೂ ರೈತರಿಗೆ ಒಳ್ಳೆಯದಾದರೆ ಸಾಕು. ಶಾಸಕರ ವೈಯಕ್ತಿಕ ವಿಚಾರವನ್ನ ಜನಸಾಮಾನ್ಯರ ನಡುವೆ ತರುವುದು ತಪ್ಪು ಎಂದಿದ್ದಾರೆ. ವಾಟರ್‌ ಬೋರ್ಡ್‌ ರಾಮಣ್ಣ, ಬಿ.ಆರ್‌. ಗುಡ್ಡೇಗೌಡ ಮಾತನಾಡಿದರು.

ಪುರಸಭೆ ಸದಸ್ಯ ಕೆ.ವಿ.ಬಾಲು, ಎಂ.ಎನ್‌.ಮಂಜುನಾಥ್‌, ಕೆ.ಕಾಂತರಾಜು, ಮಾಜಿ ಅಧ್ಯಕ್ಷ ಪಿ.ವಿ.ಸೀತಾರಾಂ, ರಾಜಣ್ಣ, ಗಂಗರಾಜು, ತಾಪಂ ಸದಸ್ಯ ಶಂಕರ್‌, ರೂಪೇಶ್‌, ಅನಿಲ್‌, ಹೇಮಾವತಿ ಭೈರಪ್ಪ, ತಾಲೂಕು  ಜೆಡಿಎಸ್‌ ಯುವ ಅಧ್ಯಕ್ಷ ವಿಜಯ ಕುಮಾರ್‌, ತಾಲೂಕು ಮಹಿಳಾ ಅಧ್ಯಕ್ಷೆ ಶೈಲಜಾ, ಸುರೇಶ್‌, ನವಾಬ್‌, ವೆಂಕಟೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next