Advertisement

ಕೈ ತಪ್ಪಿದ ಟಿಕೆಟ್:‌ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ ಅಭಿಮಾನಿಗಳ ಆಕ್ರೋಶ

01:35 PM Apr 12, 2023 | Team Udayavani |

ಹುಬ್ಬಳ್ಳಿ: ಕುಂದಗೋಳ ಮತಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಬಂಡಾಯ ಭುಗಿಲೆದ್ದಿದ್ದು, ಟಿಕೆಟ್ ವಂಚಿತ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ ಅಭಿಮಾನಿಗಳು, ಕಾರ್ಯಕರ್ತರು ಬುಧವಾರ ಅದರಗುಂಚಿನಲ್ಲಿ ಸಭೆ ನಡೆಸಿ ಬೆಂಬಲ ವ್ಯಕ್ತಪಡಿಸಿದರಲ್ಲದೆ, ಸ್ಪರ್ಧೆಗಿಳಿವಂತೆ ಒಕ್ಕೊರಲಿನ ಒತ್ತಾಯ ಮಾಡಿದರು.

Advertisement

ಟಿಕೆಟ್ ಕೊಡುವ ಪಕ್ಷದಿಂದ ಅಥವಾ ಪಕ್ಷೇತರರಾಗಿಯಾದರೂ ಸ್ಪರ್ಧೆ ಮಾಡಲೇಬೇಕೆಂದು ಆಗ್ರಹಿದರು.

ಬಿಜೆಪಿಯಲ್ಲಿ ನಿಮಗೆ ಉಳಿಗಾಲವಿಲ್ಲ ಉಪ ಚುನಾವಣೆಯಲ್ಲಿ ಕುತಂತ್ರದಿಂದ ನಿಮ್ಮನ್ನು ಸೋಲಿಸಲಾಗಿದೆ. ನಿಮ್ಮೊಂದಿಗೆ ನಾವಿದ್ದೇವೆ. ಮೇ 13ರಂದು ಸುಮಾರು 25 ಸಾವಿರ ಮತಗಳ ಅಂತರದಿಂದ ಗೆದ್ದು ವಿಜಯೋತ್ಸವ ಆಚರಿಸೋಣ ಎಂದು ಘೋಷಿಸಿದರು.

ಕುತಂತ್ರ ರಾಜಕಾರಣಕ್ಕೆ ಉತ್ತರ ನೀಡೋಣ ಎಂದು ನಿರ್ಧರಿಸಿದರು. ಕೇಂದ್ರದಲ್ಲಿ ಆಟವಾಡಿದ ವ್ಯಕ್ತಿಗೆ ಪಾಠ ಕಲಿಸೋಣ ಎಂದು ನಿರ್ಣಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next