Advertisement

ಕಾರು ಪಲ್ಟಿ : ಮಾಜಿ ಸಚಿವ ಜಯಚಂದ್ರ ಅವರ ಬೆನ್ನಿಗೆ ಪೆಟ್ಟು

11:54 AM Apr 20, 2022 | Team Udayavani |

ಬೆಂಗಳೂರು : ಕಾರು ಪಲ್ಟಿಯಾಗಿ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಟಿ.ಬಿ ಜಯಚಂದ್ರ ಅವರ ಬೆನ್ನಿಗೆ ಗಾಯವಾದ ಘಟನೆ ನಡೆದಿದೆ.

Advertisement

ಮಂಗಳವಾರ ತುಮಕೂರಿನ ಶಿರಾದಿಂದ ಬೆಂಗಳೂರಿಗೆ ಬರುವಾಗ ಕಳ್ಳಂಬೆಳ್ಳ ಬಳಿ ಫಾರ್ಚುನರ್ ಕಾರಿನ ಟೈರ್ ಪಂಚರ್ ಆಗಿ ಕಾರು ಪಲ್ಟಿಯಾಗಿದೆ.

ಜಯಚಂದ್ರ ಅವರು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರು ಮೂರರಿಂದ ನಾಲ್ಕು ವಾರಗಳ ಕಾಲ ವಿಶ್ರಾಂತಿಗೆ ಸೂಚಿಸಿದ್ದಾರೆ.

ಅಭಿಮಾನಿಗಳೂ ಯಾರೂ ಆಸ್ಪತ್ರೆಗೆ ಬರಬೇಡಿ, ಇಲ್ಲಿ ಬಂದರೆ ಕಷ್ಟವಾಗುತ್ತದೆ. ನಾನು ಆರಾಮವಾಗಿ ಇದ್ದೇನೆ, ಸ್ವಲ್ಪ ನೋವು ಇದೆ ಎಂದು ಜಯಚಂದ್ರ ಅವರು ಆಸ್ಪತ್ರೆಯಿಂದ ವಿಡಿಯೋ ಸಂದೇಶ ಕಳುಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next