Advertisement

ಮುಖ್ಯಮಂತ್ರಿಗಳ ಸುಳ್ಳು ಗೋವಾದ ಜನತೆಗೆ ಹೊಸತೇನಲ್ಲ : ವಿಜಯ್ ಸರ್ದೇಸಾಯಿ

12:58 PM Sep 15, 2021 | Team Udayavani |

ಪಣಜಿ: ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ರಾಜ್ಯದಲ್ಲಿ ಶೇ 100 ರಷ್ಟು ಕೋವಿಡ್ ಲಸಿಕೆ ಪೂರ್ಣಗೊಂಡಿದೆ ಎಂದು ಸುಳ್ಳು ಹೇಳಿಕೆ ನೀಡುತ್ತಿರುವುದು ಆರೋಗ್ಯ ಇಲಾಖೆಯ ಅಂಕಿ ಅಂಶಗಳಿಂದ ಬೆಳಕಿಗೆ ಬಂದಿದೆ ಎಂದು ಗೋವಾ ಫಾರ್ವಾರ್ಡ್ ಪಕ್ಷದ ಅಧ್ಯಕ್ಷ ವಿಜಯ್ ಸರ್ದೇಸಾಯಿ ಆರೋಪಿಸಿದ್ದಾರೆ.

Advertisement

ಮಡಗಾಂವನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು- ಮುಖ್ಯಮಂತ್ರಿ ಸಾವಂತ್ ರವರು ಪ್ರತಿ ಬಾರಿಯೂ ತಮ್ಮ ಸುಳ್ಳನ್ನು ಮುಚ್ಚಿಟ್ಟುಕೊಳ್ಳಲು ನೋಡುತ್ತಾರೆ. ಆದರೆ ಸತ್ಯ ಎಂದಿಗೂ ಮುಚ್ಚಿಡಲು ಸಾಧ್ಯವಿಲ್ಲ. ರಾಜ್ಯದ ಜನತೆಗೆ ಸತ್ಯದ ಅರಿವಾಗಿದೆ. ಇದರಿಂದಾಗಿ 2022 ರ ವಿ9ಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ರಾಜ್ಯದ ಜನತೆ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ.

ಮುಖ್ಯಮಂತ್ರಿಗಳ ಸುಳ್ಳು ಗೋವಾದ ಜನತೆಗೆ ಹೊಸತೇನಲ್ಲ. ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಗೋವಾದಲ್ಲಿ ಗ್ರೀನ್ ಜೋನ್ ಬಡಾಯಿ ಕೊಚ್ಚಿಕೊಂಡಿದ್ದರು. ಆದರೆ ಅವರ ಅಲಕ್ಷ್ಯದಿಂದಾಗಿ ಎರಡನೇಯ ಅಲೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಂಡರು ಎಂದು ವಿಜಯ್ ಸರ್ದೇಸಾಯಿ ನುಡಿದರು.

ಇದನ್ನೂ ಓದಿ :ಶ್ರೀರಂಗಪಟ್ಟಣ : ಅಧಿಕಾರಿಗಳ ಎಡವಟ್ಟಿನಿಂದ ಬಡ ರಿಕ್ಷಾ ಚಾಲಕನ ಬಿಪಿಎಲ್ ಕಾರ್ಡ್ ರದ್ದು

Advertisement

Udayavani is now on Telegram. Click here to join our channel and stay updated with the latest news.

Next