Advertisement

Suicide: ಮಾಜಿ ಕಾರ್ಪೊರೇಟರ್‌ ಪುತ್ರನ ಆತ್ಮಹತ್ಯೆ

11:49 PM Aug 10, 2023 | Team Udayavani |

ಬೆಂಗಳೂರು: ಅತ್ತಿಗುಪ್ಪೆಯ ಮಾಜಿ ಕಾರ್ಪೊರೇಟರ್‌ ದೊಡ್ಡಣ್ಣ ಪುತ್ರ ಗೌತಮ್‌ (29) ಅವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಂದ್ರಾಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

Advertisement

ದೊಡ್ಡಣ್ಣ ಅವರಿಗೆ ಮೂವರು ಪುತ್ರರಿದ್ದು, ಗೌತಣ್‌ ಕೊನೆಯವರು. ಕೋಣೆಗೆ ಹೋಗಿದ್ದ ಗೌತಮ್‌ನನ್ನು ಸಹೋದರ ಊಟಕ್ಕೆ ಕರೆದರೂ ಒಳಗಿನಿಂದ ಪ್ರತಿಕ್ರಿಯೆ ಬರಲಿಲ್ಲ. ಬಾಗಿಲು ಒಳಗಿನಿಂದ ಲಾಕ್‌ ಆಗಿತ್ತು. ಆದ್ದರಿಂದ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್‌ ಆಫ್ ಆಗಿತ್ತು. ಬಳಿಕ ಸಹೋದರರೇ ಬಾಗಿಲು ಮುರಿದು ಒಳಗೆ ಹೋಗಿದ್ದರು. ಆಗ ಗೌತಮ್‌ ಫ್ಯಾನ್‌ಗೆ ನೇಣು ಬಿಗಿದು ಮೃತಪಟ್ಟಿರುವುದ ಕಂಡು ಬಂತು.

ಸುಮಾರು ದಿನಗಳಿಂದ ಗೌತಮ್‌ ಯಾರ ಜತೆಗೂ ಮಾತನಾಡುತ್ತಿರಲಿಲ್ಲ. ಒಂಟಿಯಾಗಿರುತ್ತಿದ್ದ. ಈ ಬಗ್ಗೆ ವಿಚಾರಿಸಿದಾಗ ಏನೂ ಹೇಳುತ್ತಿರಲಿಲ್ಲ. ಯಾಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ಧಾನೆ ಎಂಬುದು ಗೊತ್ತಿಲ್ಲ. ಮಗನ ಸಾವಿನಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಂದೆ ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಚಂದ್ರಾಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next