Advertisement

ಬಾದಾಮಿಯಿಂದ ಮತ್ತೊಮ್ಮೆ ಸ್ಪರ್ಧೆ : ಸಿದ್ದರಾಮಯ್ಯ ಘೋಷಣೆ

01:29 PM Jul 06, 2021 | Team Udayavani |

ಬೆಂಗಳೂರು: ನಿಮ್ಮೆಲ್ಲರ ಆಸೆಯಂತೆ ಮತ್ತೊಮ್ಮೆ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಸಿದ್ದರಾಮಯ್ಯ ಕ್ಷೇತ್ರದಿಂದ ಬೆಂಗಳೂರು ನಿವಾಸಕ್ಕೆ ಬಂದಿದ್ದ ಜನರ ಸಮ್ಮುಖದಲ್ಲಿ ಮಾತಾನಾಡಿದ ಅವರು,ಬಾದಾಮಿಯಿಂದ ಸ್ಪರ್ಧಿಸುವ ಕುರಿತು ಘೋಷಿಸಿದರು.

ಬಾದಾಮಿಯಿಂದ ಬಂದಿದ್ದ ಜನರು, ಸಿದ್ದರಾಮಯ್ಯ ಯಾವ ಕಾರಣಕ್ಕೂ ಚಾಮರಾಜಪೇಟೆಗೆ ಹೋಗಬಾರದು, ಮತ್ತೆ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಸಿದ್ದರಾಮಯ್ಯ ಮುಂದೆ ಮುಖ್ಯಮಂತ್ರಿ ಆಗಬೇಕು. ಅವರು ಸಿಎಂ ಆಗುವ ಅವಕಾಶ ಇದೆ. ಹಾಗಾಗಿ ಬಾದಾಮಿಯಿಂದಲೆ ಸ್ಪರ್ಧೆ ಮಾಡಿ ಗೆಲ್ಲಬೇಕು, ಬೇರೆ ಕ್ಷೇತ್ರಕ್ಕೂ ಹೋಗಬಾರದೆಂದು ಪಟ್ಟು ಹಿಡಿದರು.

ಕೆಲ ದಿನಗಳ ಹಿಂದೆ ಶಾಸಕ ಜಮೀರ್ ಅಹ್ಮದ್  ಸಿದ್ದರಾಮಯ್ಯ ಅವರಿಗೆ ಚಾಮರಾಜಪೇಟೆಯಲ್ಲಿ ಸ್ಪರ್ಧಿಸಲು ಆಹ್ವಾನ ನೀಡಿದ್ದರು.

ಊರ ಜನರ ಅಪಾರ ಅಭಿಮಾನಕ್ಕೆ ಮಣಿದ ಸಿದ್ದರಾಮಯ್ಯ ಮತ್ತೊಮ್ಮೆ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಎರಡು ದಿನದ ನಂತರ ನಾನು ಅಲ್ಲಿಗೆ ಬರ್ತೇನೆ. ನಿಮ್ಮ ಪ್ರೀತಿ ಗೆ ಋಣಿ ಎಂದು ಭಾವನಾತ್ಮಕವಾಗಿ ನುಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next