Advertisement

ಸಂಚಲನ ಮೂಡಿಸಿದ ಶಾಮನೂರು ಶಿವಶಂಕರಪ್ಪ- ಬೊಮ್ಮಾಯಿ ರೆಸಾರ್ಟ್ ಭೇಟಿ

12:55 PM Jun 14, 2023 | Team Udayavani |

ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ದಾವಣಗೆರೆಯ ಹೊರ ವಲಯದಲ್ಲಿರುವ ರೆಸಾರ್ಟ್ ನಲ್ಲಿ ಭೇಟಿ ಮಾಡಿದ್ದು, ಈ ಸಭೆ ಇದೀಗ ಸಂಚಲನ ಮೂಡಿಸಿದೆ.

Advertisement

ಮಂಗಳವಾರ ಸಂಜೆ 7.30 ರಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸುಮಾರು 25 ನಿಮಿಷಗಳ ಕಾಲ ಸುಧೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಶಿಗ್ಗಾವಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸವರಾಜ ಬೊಮ್ಮಾಯಿ ಮತ್ತು ಶಾಮನೂರು ಶಿವಶಂಕರಪ್ಪ ಅವರನ್ನ ಭೇಟಿ ಮಾಡಿದರು.

ಇದನ್ನೂ ಓದಿ:CWC 2023: ಕೇರಳದಲ್ಲೂ ನಡೆಯಲಿದೆ ಏಕದಿನ ವಿಶ್ವಕಪ್ ಪಂದ್ಯಗಳು

ಜೂ. 16 ರಂದು ಶಾಮನೂರು ಶಿವಶಂಕರಪ್ಪ ಅವರ 93 ನೇ ಜನ್ಮ‌ದಿನವೂ ಇದೆ. ಶುಭ ಕೋರಲು ಭೇಟಿ ಆಗಿದ್ದರು ಎನ್ನಲಾಗುತ್ತದೆ. ಆದರೂ, ಭೇಟಿ ಸಮಯದಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.

Advertisement

ಒಟ್ಟಾರೆಯಾಗಿ ಸಂಬಂಧಿಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಾಸಕ ಶಾಮನೂರು ಶಿವಶಂಕರಪ್ಪ ಅವರಿಬ್ಬರ ಭೇಟಿ ಸಾಕಷ್ಟು ಕುತೂಹಲ, ಸಂಚಲನ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next