Advertisement

ಜಡ್ಜ್ ಸುದ್ದಿಗೋಷ್ಠಿ ಸರಿಯಲ್ಲ

06:00 AM May 20, 2018 | Team Udayavani |

ಹೊಸದಿಲ್ಲಿ: ಸುಪ್ರೀಂಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಜ.12ರಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ವಿರುದ್ಧ ಬಹಿರಂಗವಾಗಿ ಸುದ್ದಿಗೋಷ್ಠಿ ನಡೆಸಿದ್ದರ ಬಗ್ಗೆ ನಿವೃತ್ತ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌.ಠಾಕೂರ್‌ ಟೀಕೆ ವ್ಯಕ್ತಪಡಿಸಿದ್ದಾರೆ. ಸಾಂಸ್ಥಿಕವಾಗಿ ಇರುವ ಸಮಸ್ಯೆಗಳ ನಿವಾರಿಸಲು ಬಾಹ್ಯ ನೆರವು ಕೋರಿದ್ದು ಸರಿಯಲ್ಲ ಎಂದು ಹೇಳಿದ್ದಾರೆ. 

Advertisement

ಇದೊಂದು ಕಳವಳಕಾರಿ ಅಂಶ ಎಂದು ಹೇಳಿದ ನಿವೃತ್ತ ಮುಖ್ಯ ನ್ಯಾಯಮೂರ್ತಿ, ಈ ವಿಚಾರವು ಮಾಧ್ಯಮಗಳಿಗೆ ಮತ್ತು ರಾಜಕಾರಣಿಗಳಿಗೆ ಚರ್ಚೆಯ ಅಂಶವಾಗಿ ಮಾರ್ಪಾಡಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಬಾಹ್ಯ ನೆರವು ಕೋರುವ ಬದಲಾಗಿ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಸುಪ್ರೀಂಕೋರ್ಟ್‌ ನಲ್ಲಿಯೇ ಇರುವ ಪರಿಣತರನ್ನು ಸಂಪರ್ಕಿಸಿ ಅವರು ಪ್ರಸ್ತಾಪಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿತ್ತು ಎಂದು ಹೇಳಿದ್ದಾರೆ. ದೇಶದ ಜನ ನಾಯ್ಯಮೂರ್ತಿಗಳು ಹೊಂದಿರುವ ಕಾನೂನು ಪರಿಣತಿಯನ್ನು ಗೌರವಿಸುತ್ತಾರೆ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next