Advertisement

ಬಿಸಿಸಿಐ ಮಾಜಿ ಕಾರ್ಯದರ್ಶಿ ಅಮಿತಾಭ್‌ ಚೌಧರಿ ನಿಧನ

11:02 PM Aug 16, 2022 | Team Udayavani |

ರಾಂಚಿ: ಬಿಸಿಸಿಐ ಮಾಜಿ ಕಾರ್ಯದರ್ಶಿ, ಜಾರ್ಖಂಡ್‌ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷ ಅಮಿತಾಭ್‌ ಚೌಧರಿ (62) ಮಂಗಳವಾರ ಹೃದಯಾಘಾತದಿಂದ ನಿಧನ ಹೊಂದಿದರು.

Advertisement

ನಿವೃತ್ತ ಹಿರಿಯ ಐಪಿಎಸ್‌ ಅಧಿಕಾರಿ, ಜಾರ್ಖಂಡ್‌ ಪೊಲೀಸ್‌ ವಿಭಾಗದಲ್ಲಿ ಐಜಿಪಿ ಹುದ್ದೆಯನ್ನೂ ಅಲಂಕರಿಸಿದ್ದ ಅಮಿತಾಭ್‌ ಚೌಧರಿ, “ಜಾರ್ಖಂಡ್‌ ಪಬ್ಲಿಕ್‌ ಸರ್ವೀಸ್‌ ಕಮಿಶನ್ಸ್‌’ (ಜೆಪಿ ಎಸ್‌ಸಿ) ಅಧ್ಯಕ್ಷರಾಗಿಯೂ ಕರ್ತವ್ಯ ನಿಭಾಯಿಸಿದ್ದರು.

ಬಿಹಾರದಿಂದ ಬೇರ್ಪಟ್ಟು ನೂತನ ಜಾರ್ಖಂಡ್‌ ರಾಜ್ಯ ಉದಯವಾದಾಗ ಇಲ್ಲಿನ ಕ್ರಿಕೆಟ್‌ ಮಂಡಳಿಯ ರಚನೆಯಲ್ಲಿ ಚೌಧರಿ ಪಾತ್ರ ಮಹತ್ವದ್ದಾಗಿತ್ತು.

ಜಾರ್ಖಂಡ್‌ಗೆ ಪ್ರಥಮ ದರ್ಜೆ ಕ್ರಿಕೆಟ್‌ ಮಾನ್ಯತೆ ಲಭಿಸಿದ ಬೆನ್ನಲ್ಲೇ ಬಿಹಾರ ಪರ ಆಡುತ್ತಿದ್ದ ಮಹೇಂದ್ರ ಸಿಂಗ್‌ ಧೋನಿ ಅವರನ್ನು ಜಾರ್ಖಂಡ್‌ಗೆ ಕರೆತರುವಲ್ಲಿ, ರಾಂಚಿಯಲ್ಲಿ ಅತ್ಯುತ್ತಮ ದರ್ಜೆಯ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾ ಣದಲ್ಲಿ ಚೌಧರಿಯೇ ಪ್ರಮುಖ ಪಾತ್ರ ನಿಭಾಯಿಸಿದ್ದರು. ಅಮಿತಾಭ್‌ ಚೌಧರಿ ನಿಧನಕ್ಕೆ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next