Advertisement

ಗುಂಡ್ಯ: ಅರಣ್ಯ ಸಚಿವರ ಭೇಟಿ

03:02 PM Jun 26, 2018 | |

ಉಪ್ಪಿನಂಗಡಿ/ ನೆಲ್ಯಾಡಿ: ರಾಜ್ಯ ಅರಣ್ಯ ಸಚಿವ ಆರ್‌. ಶಂಕರ್‌ ಸೋಮವಾರ ಸಂಜೆ ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಗುಂಡ್ಯ ಅರಣ್ಯ ಇಲಾಖಾ ಪ್ರವಾಸಿ ಧಾಮಕ್ಕೆ ಭೇಟಿ ನೀಡಿ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿದರು.

Advertisement

ಸಚಿವರು ತಮ್ಮ ಭೇಟಿಯ ಸ್ಮರಣಾರ್ಥ ಪ್ರವಾಸಿ ಧಾಮದ ಪರಿಸರದಲ್ಲಿ ಸಸಿಯೊಂದನ್ನು ನೆಟ್ಟು ನೀರೆರೆದರು. ಮಂಗಳೂರು ಜಿಲ್ಲಾ ಅರಣ್ಯಾಧಿಕಾರಿ ಡಾ| ಕರಿಕಲನ್‌, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಇ.ಡಿ. ಕಮಲಾ ಕರಿಕಲನ್‌, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಡಿಎಂ ಕಿಶೋರ್‌ ಕುಮಾರ್‌ ಹಾಗೂ ಹೂವಯ್ಯ, ಪುತ್ತೂರು ಎಸಿಎಫ್ ಸುಬ್ರಹ್ಮಣ್ಯ ರಾವ್‌, ಸುಳ್ಯ ಎಸಿಎಫ್ ಜಗನ್ನಾಥ್‌, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಸಂಧ್ಯಾ ಸಚಿವರನ್ನು ಎದುರುಗೊಂಡರು.

    ದ.ಕ. ಜಿಲ್ಲಾ ಅರಣ್ಯದ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವರು, ಕಾಡಾನೆಗಳ ಹಾವಳಿ ಬಗ್ಗೆಯೂ ಅಧಿಕಾರಿಗಳೊಂದಿಗೆ ವಿಚಾರ ವಿಮರ್ಶೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next