Advertisement

ಶಿರಸಿ: ಮಳೆಯಲ್ಲಿಯೂ ಯಶಸ್ವಿ ಉರುಳು ಸೇವೆ; ಅರಣ್ಯ ಭೂಮಿ ಹಕ್ಕಿಗಾಗಿ ಹಕ್ಕೊತ್ತಾಯ

03:56 PM Sep 13, 2022 | Team Udayavani |

ಶಿರಸಿ: ಅರಣ್ಯ ಭೂಮಿ ಹಕ್ಕಿನ ಹೋರಾಟವು 32 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ಅರಣ್ಯವಾಸಿಗಳ ಸಮಸ್ಯೆಗಳನ್ನು ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಜಿಲ್ಲಾದ್ಯಂತ ಆಗಮಿಸಿದ ಅರಣ್ಯ ಅತಿಕ್ರಮಣದಾರರ ಸಮ್ಮುಖದಲ್ಲಿ ಸೆ.13 ರಂದು ಮಳೆಯಲ್ಲಿಯೂ ಉತ್ಸಾಹದಿಂದ ವಿಶಿಷ್ಟವಾಗಿ ಸಾಂಸ್ಕೃತಿಕ ವಾದ್ಯ, ಡೊಳ್ಳು, ನೃತ್ಯಗಳೊಂದಿಗೆ ಹೋರಾಟಗಾರರ ಪ್ರಮುಖರು ‘ಉರುಳು ಸೇವೆ’ಮಾಡುವ ಮೂಲಕ ವಿಶೇಷ ರೀತಿಯಲ್ಲಿ ಅರಣ್ಯ ಭೂಮಿ ಹಕ್ಕಿಗಾಗಿ ಹಕ್ಕೊತ್ತಾಯಿಸಲಾಯಿತು.

Advertisement

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಶಿರಸಿ ಮಾರಿಕಾಂಬ ದೇವಾಲಯದ ಎದುರು ಉರುಳು ಸೇವೆ ಮಾಡುವ ಸಂದರ್ಭದಲ್ಲಿ ಹೋರಾಟದ ಭಾವುಟ, ಹಕ್ಕಿಗಾಗಿ ಒತ್ತಾಯದ ಘೋಷಣೆ ಮೂಲಕ ವಿಭಿನ್ನ ರೀತಿಯ ಹೋರಾಟಕ್ಕೆ ಚಾಲನೆ ನೀಡಿರುವುದು ವಿಶೇಷ.

ವಿವಿಧ ತಾಲೂಕಿನ ಪ್ರಮುಖರಾದ ಶಿವಾನಂದ ಜೋಗಿ ಮುಂಡಗೋಡ, ಮಾರುತಿ ನಾಯ್ಕ ಮತ್ತಿಘಟ್ಟ, ಮಹೇಶ ನಾಯ್ಕ ಶಿವಳಮನೆ, ಲಕ್ಷ್ಮಣ ಮಾಳ್ಳಕ್ಕನವರ, ಎಮ್ ಪಿ ಗೌಡ ಹುಕ್ಕಳಿ, ಕಿರಣ ಮರಾಠಿ ದೇವನಳ್ಳಿ, ಶಾಂತಪ್ಪ ಮಡಲೂರು ಶಿರಸಿ, ಉಮೇಶ ನಾಯ್ಕ ಶೆಲೂರು, ರಾಮು ಗೌಡ ದನಗನಹಳ್ಳಿ ಮುಂತಾದವರು ಉರುಳು ಸೇವೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next