Advertisement

ಕಾಳ್ಗಿಚ್ಚಿನಿಂದ ನೆಲಬಾಂಬ್‌ಗಳ ಸ್ಫೋಟ : ಧರಮ್‌ಶಾಲಾದಲ್ಲಿ ನಡೆದ ಘಟನೆ

11:59 PM May 18, 2022 | Team Udayavani |

ಜಮ್ಮು: ಭಾರತ ಮತ್ತು ಪಾಕಿಸ್ಥಾನ ನಡುವಿನ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿಯಲ್ಲಿರುವ ಅರಣ್ಯದಲ್ಲಿ ಕಾಣಿಸಿಕೊಂಡಿರುವ ಕಾಳ್ಗಿಚ್ಚು, ಪೂಂಛ್ ಜಿಲ್ಲೆಯ ಅರಣ್ಯ ಪ್ರದೇಶಕ್ಕೂ ವ್ಯಾಪಿಸಿ, ಆ ವಲಯದಲ್ಲಿ ಹುದುಗಿಸಲಾಗಿದ್ದ ನೆಲ­ಬಾಂಬ್‌ಗಳ ಸ್ಫೋಟಕ್ಕೂ ಕಾರಣವಾಗಿದೆ.

Advertisement

ಸೋಮವಾರದಂದು, ಎಲ್‌ಒಸಿ ಬಳಿಯ ಮೆಂಧಾರ್‌ ಸೆಕ್ಟರ್‌ನಲ್ಲಿರುವ ಅರಣ್ಯ ಪ್ರದೇಶದಲ್ಲಿ ಕಾಳ್ಗಿಚ್ಚು ಕಾಣಿಸಿ­ಕೊಂಡು, ನಿಧಾನವಾಗಿ ಮೆಂಧಾರ್‌ ಸೆಕ್ಟರ್‌ನಲ್ಲಿರುವ ಅರಣ್ಯಕ್ಕೂ ವ್ಯಾಪಿಸಿತು. ಸೇನೆಯ ಕಾರ್ಯಾಚರಣೆಯಿಂದ ಬುಧ­ವಾರದಂದು ಬೆಂಕಿಯನ್ನು ನಿಯಂತ್ರ­ಣಕ್ಕೆ ತರಲಾಯಿತು. ಆದರೂ ಬೆಂಕಿಯ ಉಷ್ಣತೆಯಿಂದಾಗಿ ಧರಮ್‌ಶಾಲಾ ಬ್ಲಾಕ್‌ ಹಾಗೂ ಅದರ ಸುತ್ತಲಿನ ಪ್ರದೇಶದಲ್ಲಿ ನುಸುಳುಕೋರರ ಬೇಟೆಗಾಗಿ ನೆಲದಲ್ಲಿ ಹುದು­ಗಿಸಲಾಗಿದ್ದ ಸುಮಾರು 6 ನೆಲ­ಬಾಂಬ್‌ಗಳು ಸ್ಫೋಟಗೊಂಡಿವೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಮತ್ತೆರಡು ಕಡೆ ಕಾಳ್ಗಿಚ್ಚು: ಗಡಿ ಪ್ರದೇಶಕ್ಕೆ ಹತ್ತಿರದಲ್ಲಿರುವ ರಜೌರಿ ಜಿಲ್ಲೆಯ ಸುಂದರ್‌ಬಂಡಿ ಪ್ರಾಂತ್ಯದಲ್ಲಿನ ಗಂಭೀರ್‌, ನಿಕ್ಕಾ, ಪಂಜಗ್ರಾಯೆ, ಬ್ರಹಾಮನ, ಮೊಘಾಲಾ ಎಂಬ ಸ್ಥಳಗಳಲ್ಲಿನ ಅರಣ್ಯ ಪ್ರದೇಶದಲ್ಲೂ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಇದಲ್ಲದೆ, ಕಾಲೋಕೋಟೆಯ ಕಲಾರ್‌, ರಂಥಲ್‌, ಚಿನ್ನಿ ಅರಣ್ಯ ಪ್ರದೇಶಗಳಲ್ಲೂ ಕಾಳ್ಗಿಚ್ಚು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ನೌಕಾ ನಿಗ್ರಹ ಕ್ಷಿಪಣಿಯ ಚೊಚ್ಚಲ ಪರೀಕ್ಷೆ ಯಶಸ್ವಿ: ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಕ್ಷಿಪಣಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next