Advertisement

ಪಾದಯಾತ್ರೆಗೆ ಆ್ಯಂಬುಲೆನ್ಸ್‌ ಕೇಳಿದ ದಿಗ್ವಿಜಯ್‌ ಸಿಂಗ್‌

10:18 AM Sep 27, 2017 | Team Udayavani |

ಹೊಸದಿಲ್ಲಿ: ತಾವು ನರ್ಮದಾ ನದಿ ತೀರದುದ್ದಕ್ಕೂ 3400 ಕಿ.ಮೀ. ದೂರ ನಡೆಸಲಿರುವ 6 ತಿಂಗಳ ಪಾದಯಾತ್ರೆಗೆ ಆ್ಯಂಬುಲೆನ್ಸ್‌, ಹೆಚ್ಚುವರಿ ಭದ್ರತೆ ಹಾಗೂ ಮೊಬೈಲ್‌ ಶೌಚಾಲಯ ಒದಗಿಸುವಂತೆ ಕಾಂಗ್ರೆಸ್‌ ಮುಖಂಡ ದಿಗ್ವಿಜಯ್‌ ಸಿಂಗ್‌, ಮಧ್ಯಪ್ರದೇಶ ಸರಕಾರವನ್ನು ಕೋರಿದ್ದಾರೆ. 

Advertisement

10 ವರ್ಷಗಳಿಂದ ಸ್ವಯಂಪ್ರೇರಿತರಾಗಿ ಚುನಾವಣೆ ರಾಜಕೀಯದಿಂದ ದೂರ ಉಳಿದಿದ್ದ ಸಿಂಗ್‌, ಮುಂದಿನ ವರ್ಷ ನಡೆಯಲಿರುವ ಮಧ್ಯಪ್ರದೇಶ ಚುನಾವಣೆಗೆ ಸ್ಪರ್ಧಿ ಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರದಿಂದಲೇ “ನರ್ಮದಾ ಪರಿಕ್ರಮ’ ಯಾತ್ರೆ ಕೈಗೊಳ್ಳಲಿದ್ದಾರೆ. ಈ ವೇಳೆ ಮಧ್ಯಪ್ರದೇಶದ 100 ವಿಧಾನಸಭೆ ಕ್ಷೇತ್ರಗಳಲ್ಲಿ ಸಿಂಗ್‌ ಸಂಚರಿಸಲಿದ್ದಾರೆ. ಅವರ ಮನವಿಗೆ ಸ್ಪಂದಿಸಿರುವ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ನೇತೃತ್ವದ ಬಿಜೆಪಿ ಸರಕಾರ, ಭದ್ರತೆ, ಆ್ಯಂಬುಲೆನ್ಸ್‌ ಒದಗಿಸುವುದಾಗಿ ಹೇಳಿದೆ. ಮುಖ್ಯ ಮಂತ್ರಿ ಆಗಿದ್ದ ಅವಧಿಯಲ್ಲೇ (1993-2003) ಯಾತ್ರೆಯ ಕನಸು ಕಂಡಿದ್ದಾಗಿ ತಿಳಿಸಿರುವ ಸಿಂಗ್‌, “ಯಾತ್ರೆಯಲ್ಲಿ ಕಾಂಗ್ರೆಸ್‌ ಬಾವುಟ, ಪೋಸ್ಟರ್‌ಗಳು, ಬ್ಯಾನರ್‌, ಕಾಂಗ್ರೆಸ್‌ ಘೋಷಣೆಗಳು ಇರುವುದಿಲ್ಲ,’ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next