Advertisement

ಫುಟ್‌ಪಾತ್‌ ಸಂಚಾರಕ್ಕೆ ಸಂಚಕಾರ; ಎಚ್ಚರ ತಪ್ಪಿದರೆ ಅಪಾಯಕ್ಕೆ ಆಹ್ವಾನ

07:48 PM Sep 18, 2021 | Team Udayavani |

ಮಹಾನಗರ: ಸಾರ್ವಜನಿಕರಿಗೆ ಅನುಕೂಲವಾಗಲೆಂದು ನಿರ್ಮಿಸಿರುವ ಫುಟ್‌ಪಾತ್‌ಗಳು ಮಂಗಳೂರಿನ ಕೆಲವು ಕಡೆ ನಡೆದುಕೊಂಡು ಹೋಗಲು ಸೂಕ್ತವಾಗಿಲ್ಲ ಎಂಬ ಆರೋಪ ಕೇಳಿ

Advertisement

ಬರುತ್ತಿದೆ. ಇನ್ನು ಕೆಲವೆಡೆ ಫುಟ್‌ಪಾತ್‌ ಅಪಾಯವನ್ನು ಆಹ್ವಾನಿಸುತ್ತಿದ್ದು, ಸ್ಥಳೀಯಾಡಳಿತ ಇತ್ತ ಗಮನಹರಿಸಬೇಕಿದೆ.

ನಗರದ ಕೆಲವೆಡೆ ಸ್ಮಾರ್ಟ್‌ಸಿಟಿ, ಮನಪಾ ವತಿಯಿಂದ ವ್ಯವಸ್ಥಿತ ಫುಟ್‌ಪಾತ್‌ ವ್ಯವಸ್ಥೆ ನಿರ್ಮಿಸ ಲಾಗಿದೆ. ಆದರೆ ಬೆಂದೂರ್‌ವೆಲ್‌, ಕಂಕನಾಡಿ, ಬಲ್ಮಠ, ಸ್ಟೇಟ್‌ಬ್ಯಾಂಕ್‌, ಉರ್ವಸ್ಟೋರ್‌, ಚಿಲಿಂಬಿ, ಕೆ.ಎಸ್‌. ರಾವ್‌ ರಸ್ತೆ, ಪಡೀಲ್‌ ಸಹಿತ ವಿವಿಧ ಕಡೆಗಳಲ್ಲಿ ಫುಟ್‌ಪಾತ್‌ ವ್ಯವಸ್ಥೆ ಅಸಮರ್ಪಕವಾಗಿದೆ. ಬೆಂದೂರ್‌ವೆಲ್‌ನಿಂದ ಬಲ್ಮಠ ಕಡೆ ಬರುವಾಗ ಆಸ್ಪತ್ರೆ, ಶಿಕ್ಷಣ ಸಂಸ್ಥೆ ಸಹಿತ ಹಲವಾರು ಅಂಗಡಿಗಳಿವೆ. ಈ ಭಾಗದಲ್ಲಿನ ಮಂಗಳೂರು ನರ್ಸಿಂಗ್‌ ಹೋಂ ಎದುರು ಫುಟ್‌ಪಾತ್‌ಗೆ ಅಳವಡಿಸಿದ ಸ್ಲಾéಬ್‌ ಮುರಿದು ಹೋಗಿದ್ದು, ಇದರಿಂದ ಪಾದಚಾರಿಗಳಿಗೆ ಸಮಸ್ಯೆ ಎದುರಾಗಿದೆ.

ಹುಲ್ಲು, ಗಿಡ-ಗಂಟಿ ಬೆಳೆದು ಫ‌ುಟ್‌ಪಾತ್‌ ಕಾಣದಂತಾಗಿದೆ!: 

ಪಂಪ್‌ವೆಲ್‌ನಿಂದ ಕಂಕನಾಡಿಗೆ ಬರುವಾಗ ರಸ್ತೆಯ ಅರ್ಧ ಭಾಗದವರೆಗೆ ಫುಟ್‌ಪಾತ್‌ ಚೆನ್ನಾಗಿದೆ. ಬಳಿಕ ಆ ಪ್ರದೇಶದಲ್ಲಿ ಹುಲ್ಲು, ಗಿಡ-ಗಂಟಿ ಬೆಳೆದಿದ್ದು, ಫುಟ್‌ಪಾತ್‌ ಕಾಣದೆ ರಸ್ತೆ ಮೇಲೆ ನಡೆದುಕೊಂಡು ಹೋಗಬೇಕಾಗಿದೆ. ಈ ರಸ್ತೆಯಲ್ಲಿ ಸದಾ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದ್ದು, ವಾಹನಗಳು ಅತ್ತಿಂದಿತ್ತ ಸಂಚರಿಸುತ್ತಿರುತ್ತದೆ.

Advertisement

ಫುಟ್‌ಪಾತ್‌ ಬಳಿ ಪೈಪ್‌ ರಾಶಿ

ನಗರದ ವಿವಿಧ ಭಾಗಗಳಲ್ಲಿ ಫುಟ್‌ಪಾತ್‌ ಬದಿಯಲ್ಲಿ ಗ್ಯಾಸ್‌ ಸರಬರಾಜು ಕಾಮಗಾರಿ ಉದ್ದೇಶದಿಂದ ಗೈಲ್‌ ಸಂಸ್ಥೆಯು ಬೃಹತ್‌ ಪೈಪ್‌ಗ್ಳನ್ನು ರಾಶಿ ಹಾಕಿದೆ. ಈ ಕುರಿತಂತೆ ಈಗಾಗಲೇ ಪಾಲಿಕೆ ಆ ಸಂಸ್ಥೆಗೆ ಎಚ್ಚರಿಕೆ ನೀಡಿದರೂ ಕ್ಯಾರೇ ಎನ್ನುತ್ತಿಲ್ಲ. ಪಾಲಿಕೆಯ ಎದುರು ಲಾಲ್‌ಬಾಗ್‌ನಿಂದ ಬಿಜೈವರೆಗೆ ಇತ್ತೀಚೆಗೆಯಷ್ಟೇ ವ್ಯವಸ್ಥಿತ ಫುಟ್‌ಪಾತ್‌ ಕಾಮಗಾರಿ ನಡೆದಿತ್ತು.

ರಸ್ತೆ ವಿಸ್ತರಣೆ ಜತೆಗೆ ಫುಟ್‌ಪಾತ್‌ಗೆ ಇಂಟರ್‌ಲಾಕ್‌ ಅಳವಡಿಸಲಾಗಿತ್ತು. ಆದರೆ ಫುಟ್‌ಪಾತ್‌ ಬದಿಯಲ್ಲಿ ಸದ್ಯ ಪೈಪ್‌ಗ್ಳನ್ನು ರಾಶಿ ಹಾಕಲಾಗಿದೆ. ಸೂಚನ ಫಲಕ ಕೂಡ ಫುಟ್‌ಪಾತ್‌ ಮೇಲೇ ಇದೆ. ಇದರಿಂದಾಗಿ ಸಾರ್ವಜನಿಕರು ನಡೆದುಕೊಂಡು ಹೋಗಲು ಪರದಾಡುವಂತಾಗಿದೆ. ಅದೇರೀತಿ, ನಗರದ ಎಂ.ಜಿ. ರಸ್ತೆಯಲ್ಲಿಯೂ ಪೈಪ್‌ಗ್ಳು ರಾಶಿ ಬಿದ್ದಿವೆ.

ಟೈಗರ್‌ ಕಾರ್ಯಾಚರಣೆಗೆ ಹೆದರಲ್ಲ  :

ಫುಟ್‌ಪಾತ್‌ಗಳಲ್ಲಿ ಅನಧಿಕೃತವಾಗಿ ಅಂಗಡಿ, ತಳ್ಳುಗಾಡಿ ಇಟ್ಟು ವ್ಯಾಪಾರ ಮಾಡುವವರ ವಿರುದ್ಧ ಪಾಲಿಕೆ ಟೈಗರ್‌ ಕಾರ್ಯಾಚರಣೆ ನಡೆಸುತ್ತಿದೆ. ಈ ಹಿಂದೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅನೇಕ ಬಾರಿ ಈ ವಿಚಾರ ಚರ್ಚೆ ನಡೆಸಿ ಟೈಗರ್‌ ಕಾರ್ಯಾಚರಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ತೀರ್ಮಾನಿಸ ಲಾಗಿತ್ತು. ಆದರೆ ನಗರದ ಕೆಲವು ಪ್ರದೇಶದ ರಸ್ತೆ ಬದಿಗಳಲ್ಲಿ ಮಾತ್ರ ಪಾಲಿಕೆಯು ಕಾರ್ಯಾಚರಣೆ ನಡೆಸುತ್ತಿದೆ ಎಂಬ ಆಕ್ಷೇಪ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ. ಕೆಲವು ಕಡೆಗಳಲ್ಲಿ ಪಾಲಿಕೆ ಟೈಗರ್‌ ಕಾರ್ಯಾಚರಣೆ ನಡೆಸಿದರೂ ಮರುದಿನ ಅದೇ ಜಾಗದಲ್ಲಿ ಅನಧಿಕೃತ ವ್ಯಾಪಾರ ಸಾಗುತ್ತಿದೆ.

ಗೈಲ್‌ ಸಂಸ್ಥೆಯು ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿಗೆಂದು ಮಂಗಳೂರಿನ ಕೆಲವು ಕಡೆಗಳಲ್ಲಿ ರಸ್ತೆ ಬದಿ, ಫುಟ್‌ಪಾತ್‌ ಬದಿಗಳಲ್ಲಿ ಪೈಪ್‌ಗ್ಳನ್ನು ರಾಶಿ ಹಾಕಿರುವುದು ಗಮನಕ್ಕೆ ಬಂದಿದೆ. ಈ ವಿಷಯಕ್ಕೆ ಸಂಬಂಧಿಸಿ ಸಂಬಂಧಪಟ್ಟ ಇಲಾಖೆಗೆ ಈಗಾಗಲೇ ಸೂಚನೆ ನೀಡಿದ್ದೇವೆ. ಆದರೂ ಆ ಸಂಸ್ಥೆ ಪೈಪ್‌ಗ್ಳನ್ನು ತೆಗೆದಿಲ್ಲ. ಇದೀಗ ಮತ್ತೂಮ್ಮೆ ಅವರಿಗೆ ಎಚ್ಚರಿಕೆ ನೀಡಲಾಗುವುದು. -ಪ್ರೇಮಾನಂದ ಶೆಟ್ಟಿ,ಮನಪಾ ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next