Advertisement

Fool.. ಏಕವಚನ :ಪೋಸ್ಟ್ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಅನಂತ್ ತಿರುಗೇಟು

08:08 PM Jan 14, 2024 | Team Udayavani |

 ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನ ಬಳಸಿದ ಕುರಿತು ಕಾಂಗ್ರೆಸ್ ಪಾಳಯದಿಂದ ಟೀಕಾ ಪ್ರಹಾರಗಳು ಹರಿದು ಬರುತ್ತಿರುವ ಬೆನ್ನಲ್ಲೇ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಸಾಮಾಜಿಕ ತಾಣ ಫೇಸ್ ಬುಕ್ ನಲ್ಲಿ ಹಳೆಯ ವಿಡಿಯೋ ತುಣುಕೊಂದನ್ನು ಪೋಸ್ಟ್ ಮಾಡಿ ತಿರುಗೇಟು ನೀಡಿದ್ದಾರೆ.

Advertisement

”ಯಾವುದು ಸರಿ, ಯಾವುದು ತಪ್ಪು…ಇದು ಪ್ರಜ್ಞಾವಂತ ಸಮಾಜಕ್ಕೆ ಬಿಟ್ಟ ವಿಷಯ! (ನನಗೆ ಬಂದಂತಹ ತುಣುಕನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ) ಎಂದು ಸಿಎಂ ಸಿದ್ದರಾಮಯ್ಯ ಈ ಹಿಂದೆ ಮಾಧ್ಯಮ ಪ್ರತಿನಿಧಿಗಳ ಎದುರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೂರ್ಖ ಎಂದು ಏಕವಚನ ಬಳಸಿ ಮಾತನಾಡಿದುದನ್ನು ನೆನಪಿಸಿದ್ದಾರೆ.

ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರ ಕುರಿತು, ”ಹಿ ಇಸ್ ಎ ಫೂಲ್, ಸರ್ಜಿಕಲ್ ಸ್ಟ್ರೈಕ್ ಮಾಡಿರುವುದು ಸೈನಿಕರು. ಇವ ಏನು ಗನ್ ತೆಗೆದುಕೊಂಡು ಹೋಗಿದ್ನಾ? ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಮಹಾ ತಪ್ಪು” ಎಂದು ಹೇಳಿಕೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next