Advertisement

ಚಂಡಮಾರುತ ಸಂತ್ರಸ್ತರಿಗೆ ಸಿದ್ಧ ಆಹಾರ ಪೂರೈಕೆ

06:34 AM May 06, 2019 | Lakshmi GovindaRaj |

ಮೈಸೂರು: ಫೋನಿ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಸಂತ್ರಸ್ತರಾಗಿರುವವರಿಗೆ ಮೈಸೂರಿನ ಕೇಂದ್ರಿಯ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್ಟಿಆರ್‌ಐ)ದಿಂದ ಸಿದ್ಧ ಆಹಾರ ಪೂರೈಸಲಾಗುತ್ತಿದೆ.

Advertisement

ಮೊದಲ ಹಂತದಲ್ಲಿ 5 ಟನ್‌ಗಳಷ್ಟು ಆಹಾರವನ್ನು ಸೋಮವಾರ ವಿಮಾನದ ಮೂಲಕ ಕಳುಹಿಸಲಾಗುತ್ತಿದೆ. ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಆಂಧ್ರಪ್ರದೇಶದಲ್ಲಿ ಚಂಡಮಾರುತದಿಂದ ಸಂತ್ರಸ್ತರಾಗಿರುವ ಸುಮಾರು 1 ಲಕ್ಷ ಜನರಿಗೆ ಈ ಆಹಾರ ಪೂರೈಸಲಾಗುತ್ತಿದೆ.

ಅವಲಕ್ಕಿ (ಇಂಮ್ಲಿà ಪೋಹ), ಉಪ್ಪಿಟ್ಟು (ರೆಡಿ ಟು ಇಟ್‌), ಉಪ್ಪಿಟ್ಟು (ರೆಡಿ ಟು ಕುಕ್‌), ಚಪಾತಿ, ಟೊಮೆಟೋ ಚಟ್ನಿ, ಹೈ ಪ್ರೋಟಿನ್‌ ರಸ್ಕ್ ಮತ್ತು ಬಿಸ್ಕತ್‌ಗಳನ್ನು ಪೂರೈಸಲಾಗುವುದು.

ಜತೆಗೆ, ಕೇರಳದ ವೈನಾಡಿನಲ್ಲಿ ಸಂಸ್ಥೆಯ ತಂತ್ರಜ್ಞಾನದಲ್ಲಿ ಚಪಾತಿ ತಯಾರಿಕೆ ನಡೆಯುತ್ತಿದ್ದು, 20 ಸಾವಿರ ಚಪಾತಿಗಳನ್ನು ಪೂರೈಸಲಾಗುತ್ತಿದೆ ಎಂದು ಸಿಎಫ್ಟಿಆರ್‌ಐ ನಿರ್ದೇಶಕ ಡಾ.ಕೆ.ಎಸ್‌.ಎಂ.ಎಸ್‌.ರಾಘವ ರಾವ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next