Advertisement

ಬೈಕ್‌ ಸರಿಯಾಗಿ ನಿಲ್ಲಿಸಲು ಹೇಳಿದ್ದಕ್ಕೆ ಗಾರ್ಡ್‌ ಕೊಲೆ: ಫುಡ್‌ ಡೆಲಿವರಿ ಬಾಯ್‌ ಸೆರೆ

10:15 AM Jun 24, 2022 | Team Udayavani |

ಬೆಂಗಳೂರು: ಫ‌ುಡ್‌ ಡೆಲಿವರಿ ಬಾಯ್‌ನಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಪಾರ್ಟ್‌ಮೆಂಟ್‌ವೊಂದರ ಸೆಕ್ಯೂರಿಟಿ ಗಾರ್ಡ್‌ ಮೃತಪಟ್ಟಿದ್ದಾರೆ.

Advertisement

ಕುಮಾರ್‌ ನಾಯಕ್‌ (46) ಮೃತ ಸೆಕ್ಯೂರಿಟಿ ಗಾರ್ಡ್‌. ಕೃತ್ಯ ಎಸಗಿದ ಕಾರ್ತಿಕ್‌ನನ್ನು ಬಂಧಿಸಲಾಗಿದೆ.

ಜೂನ್‌ 12ರಂದು ಕೊಡಿಗೇಹಳ್ಳಿ ಗೇಟ್‌ ಬಳಿ ಇರುವ ಅಪಾರ್ಟ್‌ಮೆಂಟ್‌ಗೆ ಹೋಗಿದ್ದ ಕಾರ್ತಿಕ್‌ ರಸ್ತೆಯಲ್ಲಿ ಬೈಕ್‌ ನಿಲ್ಲಿಸಿ ಆಹಾರ ಕೊಡಲು ಹೋಗುತ್ತಿದ್ದ. ಆಗ ಸೆಕ್ಯೂರಿಟಿ ಗಾರ್ಡ್‌, ರಸ್ತೆಯಲ್ಲಿ ಬೈಕ್‌ ನಿಲ್ಲಿಸಿದ್ದಿಯಾ ಸರಿಯಾಗಿ ನಿಲ್ಲಿಸುವಂತೆ ಹೇಳಿದ್ದಾರೆ. ಆದರೂ ಆರೋಪಿ ಹಾಗೆಯೇ ಹೋಗಿದ್ದಾನೆ. ಹೀಗಾಗಿ ಕುಮಾರ್‌ ನಾಯಕ್‌ ಖುದ್ದು ಬೈಕ್‌ ನಿಲ್ಲಿಸಲು ಹೋದಾಗ ನಿಯಂತ್ರಣ ತಪ್ಪಿ ಬೈಕ್‌ ಕೆಳಗೆ ಬಿದ್ದಿದ್ದೆ. ಅದರಿಂದ ಕೋಪಗೊಂಡ ಕಾರ್ತಿಕ್‌ ಸೆಕ್ಯೂರಿಟಿ ಗಾರ್ಡ್‌ಗೆ ನಿಂದಿಸಿದ್ದಾನೆ. ಅದು ವಿಕೋಪಕ್ಕೆ ಹೋದಾಗ ಮನಬಂದಂತೆ ಹೊಡೆದಿದ್ದು, ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸೆಕ್ಯೂರಿಟಿ ಗಾರ್ಡ್‌ನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಗುರುವಾರ ಬೆಳಗ್ಗೆ ಚಿಕಿತ್ಸೆ ಫ‌ಲಕಾರಿಯಾಗದೆ ಕುಮಾರ್‌ ನಾಯಕ್‌ ಮೃತಪಟ್ಟಿದ್ದಾರೆ.

ಇದನ್ನೂ ಓದಿ:ಮಂಗಳೂರು: ಸ್ಕೂಟರ್‌ ಶೋ ರೂಮ್‌ ಬೆಂಕಿಗಾಹುತಿ

ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ಕಾರ್ತಿಕ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next