Advertisement

28 ಮಂದಿಗೆ ಜಾನಪದ ಅಕಾಡೆಮಿ ಪ್ರಶಸ್ತಿ

09:32 AM Feb 28, 2020 | Lakshmi GovindaRaj |

ಉಡುಪಿ: ಕರ್ನಾಟಕ ಜಾನಪದ ಅಕಾಡೆಮಿಯ 2019ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಮತ್ತು ಜಾನಪದ ತಜ್ಞ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟವಾಗಿದೆ.

Advertisement

ಉಡುಪಿಯಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿ ರುವ ಜಾನಪದ ಪ್ರಕಾರಗಳ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಆಗಮಿಸಿದ್ದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಬಿ. ಮಂಜಮ್ಮ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆಗೊಳಿಸಿದರು.

ಜಿಲ್ಲೆಗೆ ಒಬ್ಬರಂತೆ ಹಿರಿಯ ಕಲಾವಿದರನ್ನು ಪ್ರಶಸ್ತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇದುವರೆಗೆ ಗುರುತಿಸದೆ ಇರುವ ಪ್ರತಿಭಾನ್ವಿತ ಕಲಾವಿದರನ್ನು ಹುಡುಕಿ ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರಶಸ್ತಿ ಪ್ರದಾನ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲ ಎಂದರು.

ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರು: ಎಂ. ಗೌರಮ್ಮ , ಹಲಸೂರು ಬೆಂಗಳೂರು (ಜಾನಪದ ಗಾಯನ), ಲಕ್ಷಮ್ಮ ತೇರಿನಬೀದಿ, ದೊಡ್ಡಬಳ್ಳಾಪುರ (ಭಜನೆ ಪದ ಗಳು), ಅಂಕನಹಳ್ಳಿ ಶಿವಣ್ಣ ಕೂಟಗಲ್‌, ರಾಮನಗರ (ಪೂಜಾಕುಣಿತ), ಅಂಗಡಿ ವೆಂಕಟೇಶಪ್ಪ, ಕಾಡಹಳ್ಳಿ, ಕೋಲಾರ (ತತ್ವಪದ), ರಂಗಯ್ಯ ಕುಣಿಗಲ್‌, ತುಮ ಕೂರು (ಜಾನಪದಗೀತೆ), ಪಿ.ಜಿ. ಪರಮೇಶ್ವರಪ್ಪ, ಜಗಳೂರು, ದಾವಣೆಗೆರೆ (ವೀರಗಾಸೆ), ತಿಪ್ಪಣ್ಣ ದೊಡ್ಡಸಿದ್ಧಹಳ್ಳಿ, ಚಿತ್ರದುರ್ಗ (ಗೊರವರ ಕುಣಿತ), ಮುನಿರೆಡ್ಡಿ ಮುರುಗಮಲ್ಲ, ಚಿಕ್ಕಬಳ್ಳಾಪುರ (ಜಾನಪದ ಗಾಯನ), ಜಿ.ಸಿ. ಮಂಜಪ್ಪ ಗೌತಮಪುರ ಶಿವಮೊಗ್ಗ (ಡೊಳ್ಳುಕುಣಿತ),

ಮಾದಶೆಟ್ಟಿ, ನಂಜನಗೂಡು, ಮೈಸೂರು (ಕಂಸಾಳೆ ನೃತ್ಯ), ಸ್ವಾಮಿಗೌಡ ಪಾಂಡವಪುರ, ಮಂಡ್ಯ (ಬೀಸುವ ಪದಗಳು ಮತ್ತು ಪುರುಷ ಕಲಾವಿದ), ಗೌರಮ್ಮ ದೊಡ್ಡರಾಯನ ಪೇಟೆ, ಚಾಮರಾಜನಗರ (ಸೋಬಾನೆ), ಜೆ.ಕೆ. ರಾಮ ವಿರಾಜಪೇಟೆ, ಕೊಡಗು (ಕೊಡವರ ಕುಣಿತ), ಕಪಿನಿ ಗೌಡ ಶ್ರವಣಬೆಳಗೊಳ, ಹಾಸನ (ಕೋಲಾಟ) ಡಾ.ಎಚ್‌.ಸಿ. ಈಶ್ವರ ನಾಯಕ, ನರಸಿಂಹರಾಜಪುರ ಚಿಕ್ಕಮಗಳೂರು (ನಾಟಿವೈದ್ಯ), ಸಾಧು ಪಾಣಾರ ಅಲೆವೂರು, ಉಡುಪಿ (ಭೂತಕೋಲ), ರುಕ್ಮಯ್ಯ ಗೌಡ, ಪುದುವೆಟ್ಟು ದ.ಕ.(ಸಿದ್ಧವೇಷ), ಸಂಕಮ್ಮ ಮುದುಗಾಪುರ್‌, ರಾಮದುರ್ಗಾ (ಬೆಳಗಾವಿ),

Advertisement

ರುಕ್ಮಿಣಿ ಮಲ್ಲಪ್ಪ ಹರನಾಳ ಜನಮಖಂಡಿ, ಬಾಗಲಕೋಟೆ (ಮದುವೆ ಹಾಡು), ಮಲ್ಲಯ್ಯ ರಾಚಯ್ಯ ತೋಟಗಂಟೆ, ಧಾರವಾಡ (ಜಾನಪದ ಸಂಗೀತ), ಹನುಮಂತಪ್ಪ ಚಿಕ್ಕಲಿಂಗದಹಳ್ಳಿ, ಹಾವೇರಿ(ಭಜನೆ ಕೋಲಾಟ), ನಾಗರಾಜ ನಿ. ಜಕ್ಕಮ್ಮನವರ್‌ ನಿಲಗುಂದ, ಗದಗ (ಗೀಗೀಪದ), ನಿಂಬೆವ್ವ ಕೆಂಚಪ್ಪಗುಬ್ಬಿ, ಇಂಗಳೇಶ್ವರ, ವಿಜಯಪುರ (ಸೋಬಾನೆ ಪದ), ಹುಸೇನಾಬಿ ಬುಡೇನ್‌ಸಾಬ್‌ ಹಳಿಯಾಳ, ಉತ್ತರಕನ್ನಡ (ಸಿದ್ಧಿ ಢಮಾಮಿ ನೃತ್ಯ), ಗಂಗಾಧರಯ್ಯ ಸ್ವಾಮಿ ಅಗ್ಗಿಮಠ ಮಕ್ತಾಂಪುರ ಕಲಬುರುಗಿ (ಪುರುವಂತಿಕೆ),

ತುಳಸಿರಾಮ ಭೀಮರಾವ ಸುತಾರ, ಭಾಲ್ಕಿ, ಬೀದರ(ಆಲದ ಎಳೆಯಿಂದ ಸಂಗೀತ), ಶಾಂತವ್ವ ಲಚಮಪ್ಪ ಲಮಾಣಿ, ಗೋಲೇಕೊಪ್ಪ ಕೊಪ್ಪಳ (ಲಂಬಾಣಿ ನೃತ್ಯ), ಸೂಗಪ್ಪ ನಾಗಪ್ಪ ದೇವಸುಗೂರು, ರಾಯಚೂರು (ತತ್ವಪದ), ವೇಷಗಾರ ಮೋತಿ ರಾಮಣ್ಣ, ಹರಪನಹಳ್ಳಿ, ಬಳ್ಳಾರಿ (ಹಗಲುವೇಷ), ಶಿವಮೂರ್ತಿ, ತನೀಕೆದಾರ ಪೇಟೆ, ಅಮ್ಮಾಪುರ, ಯಾದಗಿರಿ (ಗೀಗೀಪದ). ಜಾನಪದ ತಜ್ಞ; ಡಾ. ಜಿ.ಶಂ. ಪರಮಶಿವಯ್ಯ ತಜ್ಞ ಪ್ರಶಸ್ತಿ: ಡಾ. ಚಕ್ಕರೆ ಶಿವಶಂಕರ್‌ ರಾಮನಗರ.

ಡಾ. ಬಿ.ಎಸ್‌. ಗದ್ದಿಗಿಮಠ ತಜ್ಞ ಪ್ರಶಸ್ತಿ: ಕಲಬುರಗಿ ಡಾ. ಬಸವರಾಜ ಪೊಲೀಸ್‌ ಪಾಟೀಲ್‌ ಆಯ್ಕೆಗೊಂಡಿದ್ದಾರೆ.

ಲಲಿತಕಲಾ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರಕಟ
ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿ ಬುಧವಾರ 2019ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ 48ನೇ ವಾರ್ಷಿಕ ಕಲಾ ಬಹುಮಾನಕ್ಕೆ ಆಯ್ಕೆಯಾದ ಕಲಾವಿದರ ಹೆಸರನ್ನು ಪ್ರಕಟಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಲಿಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ, ಕಲಬುರಗಿ ಜಿಲ್ಲೆಯ ವಾಡಿ ಪ್ರದೇಶದ ಹಿರಿಯ ಕಲಾವಿದ ಪ್ರಕಾಶ ಗಡ್ಕರ್‌,

ದಾವಣಗೆರೆಯ ಬಿ.ಆರ್‌.ಕೊರ್ತಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಜಿ.ಎಂ.ಹೆಗಡೆ ತಾರ ಗೋಡು ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ ಎಂದರು. ಪ್ರಶಸ್ತಿ 50 ಸಾವಿರ ರೂ.ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ. ಹಾಗೆ ಯೇ 10 ಮಂದಿ ಕಲಾವಿದರನ್ನು 48ನೇ ವಾರ್ಷಿಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದ್ದು ಇದು 25 ಸಾವಿರ ರೂ.ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.

ಮಾ. 21ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಧಕರುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. 2019-20 ನೇ ಸಾಲಿನ 48ನೇ ವಾರ್ಷಿಕ ಕಲಾ ಪ್ರದರ್ಶನ ಮತ್ತು ಸ್ಪರ್ಧೆಗೆ ರಾಜ್ಯದ ವಿವಿಧಡೆಗಳಿಂದ 367 ಕಲಾವಿದರ 605 ಕಲಾಕೃತಿಗಳು ಮತ್ತು ಛಾಯಾಚಿತ್ರಗಳು ಸ್ವೀಕೃತವಾಗಿದ್ದವು. ಇದರಲ್ಲಿ 68 ಕಲಾಕೃತಿಗಳನ್ನು ಖುದ್ದಾಗಿ ಪರಾಮರ್ಶಿಸಿ ಅತ್ಯುತ್ತಮ 10 ಕಲಾಕೃತಿಗಳನ್ನು ಪ್ರಶಸ್ತಿ ಆಯ್ಕೆ ಸಮಿತಿ ಆಯ್ಕೆ ಮಾಡಿದೆ ಎಂದು ಮಾಹಿತಿ ನೀಡಿದರು.

ಅಕಾಡೆಮಿ ಬಹುಮಾನಕ್ಕಾಗಿ ಕಲಾವಿದರಿಂದ 300 ರೂ. ಶುಲ್ಕವನ್ನು ಪಡೆಯಲಾಗುತ್ತದೆ. ಮತ್ತೆ ಹಿಂತಿರುಗಿಸುವ ಬಗ್ಗೆ ಚರ್ಚೆ ನಡೆದಿದೆ. ಕರ್ನಾಟಕ ಲಲಿತಕಲಾ ಅಕಾಡೆಮಿ ರಿಜಿಸ್ಟ್ರಾರ್‌ ಬಸವರಾಜ ಹೂಗಾರ್‌ ಉಪಸ್ಥಿತರಿದ್ದರು.

ಆಯ್ಕೆಯಾದ ಕಲಾವಿದರು: ಓಂಕಾರ ಕಲ್ಲಪ್ಪ ಮೇತ್ರೆ (ಬೀದರ್‌ ), ತಿಪ್ಪಣ್ಣ ಎಸ್‌.ಪೂಜಾ (ಕಲಬು ರಗಿ), ಎಂ.ಎಸ್‌. ಲಿಂಗಾರಾಜು (ಚಿಕ್ಕಮಗಳೂರು), ವಿನಾಯಕ ರಾ.ಚಿಕ್ಕೋಡಿ (ಮಹಾಲಿಂಗಪೂರ), ಭರತ ಎಂ.ಲದ್ದಿಯವರ (ಧಾರವಾಡ), ಕೆ.ಎಸ್‌. ಬಸವರಾಜು (ತುಮಕೂರು), ಶಿವಕಾಂತ ಶೇಖರ (ಬೆಂಗಳೂರು), ವಿನಾಯಕ ಎನ್‌.ಹೊಸೂರ (ಬಾಗಲಕೋಟ), ವಿಜಯ ಎಸ್‌.ನಾಗವೇಕರ್‌ (ಬೆಂಗಳೂರು), ಗಣೇಶ್‌ ಪಿ.ದೊಡ್ಡಮನಿ (ಬೆಂಗಳೂರು).

Advertisement

Udayavani is now on Telegram. Click here to join our channel and stay updated with the latest news.

Next