Advertisement

ಕರಾವಳಿಯಲ್ಲಿ ಮುಂಜಾನೆ ಆವರಿಸಿದ ದಟ್ಟ ಮಂಜು! ಸೂರ್ಯನ ಕಿರಣಕ್ಕೆ ಮಂಜಿನ ತಡೆ

09:25 AM Mar 04, 2021 | Team Udayavani |

ಕಾರ್ಕಳ: ಕರಾವಳಿ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಮುಂಜಾನೆ ದಟ್ಟ ಮಂಜು ಆವರಿಸುತ್ತಿದೆ. ಅದರಲ್ಲೂ ಇಂದು ಹೆಚ್ಚೇ ಎನ್ನುವಷ್ಷು ಮಂಜು ಆವರಿಸಿತ್ತು.

Advertisement

ಉಡುಪಿ ಜಿಲ್ಲೆಯ ಕಾರ್ಕಳ ನಗರದಾದ್ಯಂತ ಗುರುವಾರ ಮುಂಜಾನೆ ದಟ್ಟ ಮಂಜು ಆವರಿಸಿತ್ತು. ಇದರಿಂದಾಗಿ ಕಾರ್ಕಳ ಮಂಜಿನ ನಗರಿಯಾಗಿತ್ತು!

ಇದನ್ನೂ ಓದಿ:ಸಿಮ್‌ ಹ್ಯಾಕ್‌ : ಮಣಿಪಾಲದವರ ನಂಬರ್‌ ಬಿಹಾರದವರಿಗೆ ! ದೂರವಾಣಿ ಸಂಸ್ಥೆಗೆ ಪೊಲೀಸರ ನೋಟಿಸ್‌

ಸಮೀಪದಲ್ಲಿ ಇರುವವರೂ ಕಾಣಿಸದಷ್ಟು ರೀತಿಯಲ್ಲಿ ಮಂಜು ಸುರಿಯುತ್ತಿತ್ತು. ಇದರಿಂದಾಗಿ ಬೆಳಗ್ಗೆ ಎಂಟು ಗಂಟೆಯಾದರೂ ವಾಹನಗಳು ದೀಪ ಹಾಕಿಕೊಂಡು ಸಂಚರಿಸುತ್ತಿದ್ದುದು ಕಂಡು ಬಂತು. ತುಸು ಚಳಿಯ ವಾತಾವರಣ ಸೃಷ್ಟಿಯಾಗಿತ್ತು.

ಇದನ್ನೂ ಓದಿ: ಕಂಬಳ ಕರೆಗೆ ಇಳಿದ ಬಾಲಕಿ : ಆರನೇ ತರಗತಿ ವಿದ್ಯಾರ್ಥಿನಿ ಚೈತ್ರಾಳ ಚಿತ್ತ ಕಂಬಳದತ್ತ!

Advertisement

ಮೋಡಗಳ ಮರೆಯಿಂದ ಮಂಜನ್ನು ಸೀಳಿಕೊಂಡು  ಹೊರಬರಲು ಸೂರ್ಯನ ಕಿರಣಗಳು ತವಕಿಸುತ್ತಿದ್ದ ದೃಶ್ಯಗಳು ಅಲ್ಲಲ್ಲಿ ಕಾಣಸಿಕ್ಕವು. ಇದು ನೋಡುಗರಿಗೆ ಮುದ ನೀಡಿತು. ಕ್ಯಾಮರದಲ್ಲಿ ಕೆಲವರು ಈ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next