Advertisement

ಆರೋಗ್ಯದೆಡೆ ಗಮನ ಹರಿಸಿ: ಜಾಧವ

02:45 PM Sep 23, 2022 | Team Udayavani |

ಚಿಂಚೋಳಿ: ಆರೋಗ್ಯ ಚೆನ್ನಾಗಿದ್ದರೆ ನಾವು ಕಂಡ ಕನಸು ನನಸಾಗುತ್ತದೆ. ಆದ್ದರಿಂದ ನಾವೆಲ್ಲ ಆರೋಗ್ಯದ ಬಗ್ಗೆ ಗಮನಹರಿಸಬೇಕು ಎಂದು ಶಾಸಕ ಡಾ|ಅವಿನಾಶ ಜಾಧವ ಹೇಳಿದರು.

Advertisement

ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಅತ್ರೇಯ ಆಸ್ಪತ್ರೆ ಮತ್ತು ಸ್ಕಾನಿಂಗ್‌ ಸೆಂಟರ್‌ (ಕಾಟಾಪೂರ)ಆಸ್ಪತ್ರೆಯಲ್ಲಿ ಉಚಿತ ಹೃದಯರೋಗ, ಮಧುಮೇಹ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಹೃದಯರೋಗ ತಜ್ಞ ಡಾ|ಅಜಯ ಕಾಟಾಪೂರ, ಸ್ತ್ರೀರೋಗ ತಜ್ಞೆ ಡಾ|ಶಾಲಿನಿ, ಡಾ|ಕಿಶನರಾವ್‌ ಕಾಟಾಪೂರ ಪಟ್ಟಣದಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.

ಮಧುಸೂಧನ ಕಾಟಾಪೂರ, ಭೀಮಶೆಟ್ಟಿ ಮುರುಡಾ, ಶಿವಯೋಗಿ ರುಸ್ತಂಪೂರ, ತಾಲೂಕು ಬಿಜೆಪಿ ಅಧ್ಯಕ್ಷ ಸಂತೋಷ ಗಡಂತಿ, ಕೆ.ಎಂ.ಬಾರಿ, ಕೆ.ಎಂ.ಬಾರಿ, ಶ್ರೀಮಂತ ಕಟ್ಟಿಮನಿ, ಆರ್‌.ಗಣಪತರಾವ್‌, ರಾಜು ಪವಾರ,ಪ್ರೇಮಸಿಂಗ್‌ ಜಾಧವ, ಅಮರ ಲೊಡನೋರ, ಕಾಶಿನಾಥ ನಾಟೀಕಾರ, ಪ್ರದೀಪ ಮೇತ್ರಿ, ಜಗನ್ನಾಥ ಟಾಕಿ, ರವಿ ಹುಸೇಬಾಯಿ ಭಾಗವಹಿಸಿದ್ದರು. ಬಿಜೆಪಿ ಮುಖಂಡ ಶ್ರೀಹರಿ ಕಾಟಾಪೂರ ಸ್ವಾಗತಿಸಿದರು, ಶಿವಯೋಗಿ ರುಸ್ತಂಪೂರ ನಿರೂಪಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next