Advertisement

ಶಿಲಾಶಾಸನಗಳಿಗೆ ಡಿಜಿಟಲ್‌ ಸ್ಪರ್ಶ

07:52 PM Feb 01, 2023 | Team Udayavani |

ಶಿಲಾ ಶಾಸನಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ಹಾಗೂ ತಿಳಿಸಲು “ಡಿಜಿಟಲ್‌ ಶಿಲಾಶಾಸನ ವಸ್ತು ಸಂಗ್ರಹಾಲಯ’ ಸ್ಥಾಪನೆಗೆ ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ ಒಂದು ಲಕ್ಷ ಶಿಲಾ ಶಾಸನಗಳು ಡಿಜಿಟಲ್‌ ಸ್ವರೂಪ ಪಡೆಯಲಿವೆ. ಈ ವಸ್ತುಸಂಗ್ರಹಾಲಯದಲ್ಲಿ “ಭಾರತ ಹಂಚಿತ ಶಾಸನಗಳ ಉಗ್ರಾಣ’ ಅಸ್ತಿತ್ವಕ್ಕೆ ಬರಲಿದೆ.

Advertisement

ಅಮೃತ್‌ ಧರೋಹರ್‌ ಯೋಜನೆ
ಜೌಗು ಪ್ರದೇಶಗಳ ಬಳಕೆಯನ್ನು ಉತ್ತೇಜಿಸಿ, ಜೀವವೈವಿಧ್ಯತೆಯನ್ನು ಹೆಚ್ಚಿಸಲು ಅಮೃತ್‌ ಧರೋಹರ್‌ ಯೋಜನೆ ಘೋಷಿಸಲಾಗಿದೆ. ಮುಂದಿನ 3 ವರ್ಷಗಳಲ್ಲಿ ಇದು ಜಾರಿಯಾಗಲಿದೆ. ಪ್ರಧಾನಿ ಮೋದಿ ಅವರ ಇತ್ತೀಚಿನ ಮನ್‌ ಕೀ ಬಾತ್‌ನಲ್ಲಿ, ಪರಿಸರ ಉಳಿವಿಗೆ ಪ್ರಮುಖವಾಗಿರುವ ಜೌಗು ಅಥವಾ ತೇವ ಪ್ರದೇಶಗಳ ಬಳಕೆ ಹಾಗೂ ಜೀವವೈವಿಧ್ಯತೆ ಹೆಚ್ಚಿಸುವ ಅಂಶಗಳನ್ನು ಪ್ರಸ್ತಾಪಿಸಿದ್ದರು. 2014ರಲ್ಲಿ 26 ಇದ್ದ ರಾಮ್‌ಸರ್‌ ತಾಣಗಳ ಸಂಖ್ಯೆ ಈಗ 275ಕ್ಕೆ ಏರಿಕೆಯಾಗಿದೆ ಎಂದಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next