Advertisement

ಬೈಂದೂರು, ಶಿರೂರು: ಪ್ರವಾಹ ಇಳಿಮುಖ, ಸಿಎಂಗಾಗಿ ಕಾದ ಮೀನುಗಾರರು 

09:11 AM Aug 04, 2022 | Team Udayavani |

ಬೈಂದೂರು : ಬೈಂದೂರು ಹಾಗೂ ಶಿರೂರು ಭಾಗದಲ್ಲಿ ಬುಧವಾರ ಪ್ರವಾಹ ಇಳಿದಿದೆ. ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳು ನಷ್ಟದ ವರದಿ ಸಿದ್ಧಪಡಿಸುತ್ತಿವೆ.

Advertisement

ಸಿಎಂಗಾಗಿ ಕಾದ ಮೀನುಗಾರರು : ಸಿಎಂ ಬೊಮ್ಮಾಯಿ ಭಟ್ಕಳದ ಮಳೆ ಹಾನಿ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿದ್ದು, ಸಮೀಪದ ಶಿರೂರಿಗೂ ಭೇಟಿ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಮೀನುಗಾರರಿದ್ದರು. ಶಿರೂರಿನಲ್ಲಿ ಸಿಎಂ ಭೇಟಿ ನೀಡಬಹುದಾದ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ ಸಿಎಂ ಭೇಟಿ ನೀಡದೆ ಇದ್ದುದು ಹಾನಿ ಅನುಭವಿಸಿರುವ ಮೀನುಗಾರರು ಮತ್ತು ಸ್ಥಳೀಯರಲ್ಲಿ ನಿರಾಶೆ ಮೂಡಿಸಿದೆ.

ಮೀನುಗಾರಿಕಾ ಇಲಾಖೆಯ ವರದಿ ಪ್ರಕಾರ ಇಲ್ಲಿ 54 ದೋಣಿಗಳಿಗೆ ಹಾನಿಯಾಗಿದ್ದು, 66 ದೋಣಿಗಳ ಬಲೆ, ಮೀನುಗಾರಿಕೆ ಪರಿಕರ ನಾಶ ಸೇರಿ ಅಂದಾಜು 3 ಕೋ.ರೂ. ನಷ್ಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next