Advertisement

ನೆರೆ ಹಾನಿ; ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

11:28 PM Aug 15, 2019 | Lakshmi GovindaRaj |

ಬಾಗಲಕೋಟೆ: ಪ್ರವಾಹಕ್ಕೆ ಮನೆ, ಬೆಳೆ ಸಂಪೂರ್ಣ ಹಾನಿಯಾಗಿದ್ದಕ್ಕೆ ಮನನೊಂದ ಮಹಿಳೆಯೊಬ್ಬರು ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುನಗುಂದ ತಾಲೂಕಿನ ರಾಮಥಾಳ ಬಳಿ ನಡೆದಿದೆ. ರೇಣವ್ವ ಮಲ್ಲೇಶಪ್ಪ ಯರನಾಳ (58) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆ.8ರಂದು ಇತಿಹಾಸದಲ್ಲೇ ಮೊದಲ ಬಾರಿ ಮಲಪ್ರಭಾ ನದಿಗೆ 1.10 ಲಕ್ಷ ಕ್ಯೂಸೆಕ್‌ ನೀರು ಹರಿದು ಬಂದಿತ್ತು.

Advertisement

ಪ್ರವಾಹ ಹಿನ್ನೆಲೆಯಲ್ಲಿ ರಾಮಥಾಳದ ರೇಣವ್ವ ಅವರಿಗೆ ಸೇರಿದ ಮನೆ ಸಂಪೂರ್ಣ ಜಲಾವೃತಗೊಂಡಿತ್ತು. ಸಾವಿರಾರು ರೂ. ಖರ್ಚು ಮಾಡಿ ಬಿತ್ತನೆ ಮಾಡಿದ್ದ ಬೆಳೆಯೂ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಇದರಿಂದ ಮನನೊಂದ ರೇಣವ್ವ, ಮಂಗಳವಾರ ಮಲಪ್ರಭಾ ನದಿಗೆ ಹಾರಿದ್ದಳು. ಗುರುವಾರ ಸಂಜೆ ರಾಮಥಾಳ-ಬೇನಾಳ ಮಧ್ಯೆ ಇರುವ ಇಂಗಳಗಿ ಸೇತುವೆ ಬಳಿ ಮೃತದೇಹ ಪತ್ತೆಯಾಗಿದೆ. ರೇಣವ್ವಳ ಪತಿ ಅಮೀನಗಡ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next