Advertisement

ಹಳ್ಳದಲ್ಲಿ ಸಿಲುಕಿದ ಕೂಲಿಕಾರ್ಮಿಕರಿದ್ದ ಟ್ರಾಕ್ಟರ್: ಸ್ಥಳೀಯರ ಸಾಹಸದಿಂದ ರಕ್ಷಣೆ

01:37 PM Sep 21, 2020 | keerthan |

ರಾಯಚೂರು: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ರವಿವಾರ ರಾತ್ರಿಯೂ ಭಾರೀ ಮಳೆಯಾಗಿದೆ. ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಮಸ್ಕಿ ತಾಲೂಕಿನ ವಟಗಲ್ ಗ್ರಾಮದ ಹಳ್ಳದಲ್ಲಿ ಕೂಲಿ ಕಾರ್ಮಿಕರು ಪರದಾಡಿದ ಪ್ರಸಂಗ ರವಿವಾರ ಸಂಜೆ ನಡೆದಿದೆ.

Advertisement

ಕೂಲಿಗಾಗಿ ತೆರಳಿದ್ದ ಮಹಿಳೆಯರನ್ನು ಟ್ರ್ಯಾಕ್ಟರ್ ಮೂಲಕ ಕರೆ ತರಲಾಗುತ್ತಿತ್ತು. ಈ ವೇಳೆ ಹಳ್ಳ ರಭಸವಾಗಿ ಹರಿಯುತ್ತಿರುವ ಕಾರಣ ಟ್ರಾಕ್ಟರ್ ಸಿಲುಕಿಕೊಂಡಿದೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ಏಪರ್ಟ್ಟಿತ್ತು.

ಇದನ್ನೂ ಓದಿ: ವಿಜಯಪುರ ಜಿಲ್ಲೆಯಲ್ಲಿ ಡೋಣಿ ನದಿ ಪ್ರವಾಹ: ಜಮೀನಿಗೆ ನುಗ್ಗಿದ ನೀರು, ಬೆಳೆ ಹಾನಿ

ಬಳಿಕ ಸ್ಥಳೀಯರು ಬೇರೆ ಟ್ರಾಕ್ಟರ್ ಗಳನ್ನು ಬಳಸಿ ಕಾರ್ಮಿಕರ ರಕ್ಷಣೆ ಮಾಡಿದ್ದಾರೆ. ಯಾವುದೇ ಅಪಾಯವಿಲ್ಲದೆ ಎಲ್ಲರನ್ನು ರಕ್ಷಿಸಲಾಗಿದೆ. ಇನ್ನೂ ಜಿಲ್ಲೆಯಲ್ಲಿ ಮಳೆ ಅವಾಂತರಗಳು ಮುಂದುವರಿದಿದ್ದು, ಬೆಳೆ ಹಾನಿ ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next