Advertisement

ಕುದ್ರುಬೈಲು: ಇಳಿಮುಖವಾಗದ ನೆರೆ ; ಸುರಕ್ಷಿತ ಸ್ಥಳಕ್ಕೆ ತೀರ ಪ್ರದೇಶದ ನಿವಾಸಿಗಳ ಸ್ಥಳಾಂತರ

10:35 PM Jul 09, 2022 | Team Udayavani |

ತೆಕ್ಕಟ್ಟೆ : ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುದ್ರುಬೈಲು ಪರಿಸರ ಸಂಪೂರ್ಣ ಜಲಾವೃತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ನಿವಾಸಿಗಳನ್ನು ಜು.9 ರಂದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

Advertisement

ಕುದ್ರುಬೈಲು ಪರಿಸರದಲ್ಲಿ ನೆರೆ ನೀರಿನ ಪ್ರಮಾಣ ಏರಿಕೆಯಾಗಿ ಮನೆಗಳಿಗೆ ನೀರು ನುಗ್ಗಿರುವ ಪರಿಣಾಮ ಇಲ್ಲಿನ ಮೇಲ್ತಾರುಮನೆ ರಘುರಾಮ ಶೆಟ್ಟಿ, ಕುದ್ರುಮನೆ ನಿವಾಸಿಗಳಾದ ನಾಗೇಶ್‌ ದೇವಾಡಿಗ ಹಾಗೂ ವಸಂತಿ ದೇವಾಡಿಗ ಕುಟುಂಬ ಸದಸ್ಯರು ತಮ್ಮ ಮನೆಯ ಜಾನುವಾರು ಸಹಿತ ನೆರೆ ನೀರಿನಲ್ಲಿಯೇ ಸುರಕ್ಷಿತ ಸ್ಥಳಾಂತರಗೊಂಡಿದ್ದಾರೆ.ತುರ್ತು ರಕ್ಷಣಾ ಕಾರ್ಯದಲ್ಲಿ ಹಿರಿಯ ಕೃಷಿಕ ರವೀಂದ್ರ ಶೆಟ್ಟಿ ದೇವಸ, ಮೇಲ್ತಾರುಮನೆ ಶ್ರೀನಾಥ ಶೆಟ್ಟಿ, ವಸಂತ್‌ ದೇವಾಡಿಗ, ದರ್ಶನ್‌ ಅವರ ಸಹಕರಿಸಿ ಮಾನವೀಯತೆ ಮೆರೆದಿದ್ದಾರೆ. ಮಳೆಯ ತೀವ್ರತೆ ಕಡಿಮೆಯಾದರೂ ಕೂಡಾ ಮಾಲಾಡಿ, ಮಲ್ಯಾಡಿ, ಹಲ್ತೂರು, ಉಳ್ತೂರು, ಕುದ್ರುಬೈಲು, ಗುಳ್ಳಾಡಿ ಹೊಳೆ ಸಾಲು ತೀರ ಪ್ರದೇಶದಲ್ಲಿ ನೆರೆ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಇದನ್ನೂ ಓದಿ : ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಬರಲಿವೆ ಆಫ್ರಿಕನ್‌ ಚೀತಾಗಳು

Advertisement

Udayavani is now on Telegram. Click here to join our channel and stay updated with the latest news.

Next