Advertisement

ಕುಷ್ಟಗಿ : ರಾಷ್ಟ್ರ ಧ್ವಜಾರೋಹಣದ ವೇಳೆ ತೊಡಕು, ಎರಡು ನಿಮಿಷ ತಡವಾಗಿ ನೆರವೇರಿದ ಧ್ವಜಾರೋಹಣ

09:43 AM Sep 17, 2022 | Team Udayavani |

ಕುಷ್ಟಗಿ : ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ರಾಷ್ಟ್ರ ಧ್ವಜಾರೋಹಣ ತೊಡಕಾದ ಹಿನ್ನೆಲೆಯಲ್ಲಿ ಎರಡು ನಿಮಿಷ ತಡವಾಗಿ ಧ್ವಜಾರೋಹಣ ವಾಯಿತು.

Advertisement

ಇಲ್ಲಿನ ತಾಲೂಕಾಡಳಿತದಲ್ಲಿ ಶನಿವಾರ ಧ್ವಜಾರೋಹಣ ವೇಳೆ ತಹಸೀಲ್ದಾರ ಎಂ.ಗುರುರಾಜ್ ಚಲವಾದಿ ಅವರು, ಧ್ವಜಾರೋಹಣ ನೆರವೇರಿಸಿದ ವೇಳೆ ರಾಷ್ಟಧ್ವಜಾ ಅರೆ ಬರೆಯಾಗಿ ಹಾರಾಡಿತು. ಆಗ ಸೃಷ್ಟಿಯಾದ ಗೊಂದಲಕ್ಕೆ ಯುವಕನೋರ್ವ ಸರಸರ ಧ್ವಜಾ ಕಂಬ ಹತ್ತಿ ತೊಡಕಾಗಿದ್ದ ಧ್ವಜಾವನ್ನು ಸರಿಪಡಿಸಿ ಗೊಂದಲಕ್ಕೆ ತೆರೆ ಎಳೆದರು.

ಆರೋಹಣ ಮುನ್ನ ಧ್ವಜವನ್ನು ಬಿಗಿಯಾಗಿ ಕಟ್ಟಿದ್ದರಿಂದ ಧ್ವಜಾ ಸ್ವತಂತ್ರವಾಗಿ ಬಿಚ್ಚಿಕೊಳ್ಳಸಲು ಸಾದ್ಯವಾಗಿರಲಿಲ್ಲ ಎಂಬುದು ಗೊತ್ತಾಗಿದೆ.

ಧ್ವಜಾರೋಹಣ ಸಂದರ್ಭದಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಸೇರಿದಂತೆ ತಾಲೂಕಾ ಅಧಿಕಾರಿಗಳು ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next