Advertisement

ತಾರಿಗುಡ್ಡೆ ರಸ್ತೆ ಸಮಸ್ಯೆ ಸರಿಪಡಿಸಿ

09:50 AM Apr 11, 2022 | Team Udayavani |

ಕೆತ್ತಿಕಲ್‌: ಇಲ್ಲಿನ ಕೆತ್ತಿಕಲ್‌ ತಾರಿಗುಡ್ಡೆಯ ಸಂಪರ್ಕ ರಸ್ತೆಯನ್ನು ಮೋರಿ ಹಾಕುವ ಕಾರಣಕ್ಕೆ ಅಗೆದು ಹಾಕಿದ ಪರಿಣಾಮ ವಾಹನ ಸಂಚಾರಕ್ಕೆ ಸದ್ಯ ಸಮಸ್ಯೆಯಾಗಿದೆ.

Advertisement

ಮೋರಿ ಹಾಕುವ ಕಾರಣಕ್ಕೆ ರಸ್ತೆಯ ಡಾಮರು ಹೋಗಿ ವಾಹನ ಚಾಲಕರಿಗೆ ಇಲ್ಲಿ ಸಂಚಾರ ಸಮಸ್ಯೆ ಆಗಿದೆ. ರಸ್ತೆಯನ್ನು ಸರಿಪಡಿಸುವ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ಆಡಳಿತ ವ್ಯವಸ್ಥೆಯವರಿಗೆ ದೂರು ನೀಡಿದರೆ ಯಾವುದೇ ಕ್ರಮ ಆಗಿಲ್ಲ ಎಂದು ತಾರಿಗುಡ್ಡೆ ನಾಗರಿಕರು ‘ಸುದಿನ’ಕ್ಕೆ ತಿಳಿಸಿದ್ದಾರೆ.

ತಿರುವೈಲು ವಾರ್ಡ್‌ಗೆ ಸಂಬಂಧಪಟ್ಟ ಈ ಸ್ಥಳದಲ್ಲಿ ನಿತ್ಯ ಹಲವು ವಾಹನಗಳು ಸಂಚರಿಸುತ್ತಿದ್ದು, ಸದ್ಯ ರಸ್ತೆ ಸಮಸ್ಯೆ ಕಾರಣದಿಂದ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next