Advertisement

ವಿಜಯಪುರ: ವಿದ್ಯುತ್ ತಂತಿ ಸ್ಪರ್ಶ ; ಕುರಿಗಾಯಿ ಬಾಲಕಿ ಬಲಿ

05:46 PM Sep 10, 2022 | Team Udayavani |

ವಿಜಯಪುರ: ವಿದ್ಯುತ್ ತಂತಿ ಸ್ಪರ್ಶಿಸಿ ಕುರಿಗಾಹಿ ಬಾಲಕಿ ಮೃತಪಟ್ಟ ಘಟನೆ ಇಂಡಿ ತಾಲೂಕಿನಲ್ಲಿ ಶನಿವಾರ ನಡೆದಿದೆ.

Advertisement

ಜಿಲ್ಲೆಯ ಇಂಡಿ ತಾಲ್ಲೂಕಿನ ತೆನ್ನಿಹಳ್ಳಿ ಗ್ರಾಮದಲ್ಲಿ ಸಂಭವಿಸಿರುವ ವಿದ್ಯುತ್ ತಂತಿ ದುರ್ಘಟನೆಯಲ್ಲಿ ಭಾಗ್ಯಶ್ರೀ ಲಾಯಪ್ಪ ಹೂವಣ್ಣನವರ ( 5) ಮೃತಪಟ್ಟಿದೆ.

ಇದನ್ನೂ ಓದಿ: ಸಿಧು ಮೂಸೆವಾಲ ಕೇಸ್: ನೇಪಾಳ ಗಡಿ ಭಾಗದಲ್ಲಿ ಮತ್ತೆ ಮೂವರ ಬಂಧನ

ತೆನ್ನಿಹಳ್ಳಿ ಗ್ರಾಮದ ಬಳಿ ಕುರಿ ಮೇಯಿಸಲು ಹೋದಾಗ ಜಮೀನನಲ್ಲಿದ್ದ ವಿದ್ಯುತ್ ಪ್ರಹಿಸುತ್ತಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ, ಸ್ಥಳದಲ್ಲೇ ಬಾಲಕಿ ಮೃತಪಟ್ಟಿದ್ದಾಳೆ.

ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿರುವ ಘಟನೆಯ ಕುರಿತು ಮಾಹಿತಿ ತಿಳಿಯುತ್ತಲೇ ಸ್ಥಳಕ್ಕೆ ತೆರಳಿದ ಪೊಲೀಸರು, ಪರಿಶೀಲನೆ ನಡೆಸಿ, ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next