Advertisement

Tragedy: ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಐವರು ಮೃತ್ಯು… ಓರ್ವನ ರಕ್ಷಣೆ

03:59 PM Apr 10, 2024 | Team Udayavani |

ಮಹಾರಾಷ್ಟ್ರ: ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಐವರು ಜೀವ ಕಳೆದುಕೊಂಡ ದಾರುಣ ಘಟನೆ ಮಹಾರಾಷ್ಟ್ರದ ಅಹಮದ್‌ನಗರದ ವಾಡ್ಕಿ ಗ್ರಾಮದಲ್ಲಿ ನಡೆದಿದೆ.

Advertisement

ವಾಡ್ಕಿ ಗ್ರಾಮದ ವ್ಯಕ್ತಿಯೊಬ್ಬರು ಮುದ್ದಾಗಿ ಸಾಕಿದ ಬೆಕ್ಕೊಂದು ಕಾಣೆಯಾಗಿತ್ತು ಎಲ್ಲ ಕಡೆ ಹುಡುಕಾಡಿದರೂ ಬೆಕ್ಕಿನ ಪತ್ತೆಯಾಗಲಿಲ್ಲ ಮಧ್ಯರಾತ್ರಿವರೆಗೂ ಮನೆಮಂದಿ ಬೆಕ್ಕು ಮನೆಗೆ ಬರಬಹುದು ಎಂದು ಕಾಯುತಿದ್ದರು ಆದರೆ ಬೆಕ್ಕು ಬರಲೇ ಇಲ್ಲ ಕೊನೆಗೆ ಎಲ್ಲ ಕಡೆ ಹುಡಕಾಡಿದಾಗ ಪಾಳುಬಿದ್ದ ಬಾವಿಯಲ್ಲಿ ಬೆಕ್ಕು ಕೂಗುವ ಸದ್ದು ಕೇಳಿದೆ.

ಈ ಪಾಳುಬಿದ್ದ ಬಾವಿಯನ್ನು ಜೈವಿಕ ಅನಿಲ ಪಿಟ್ ಆಗಿ ಬಳಸಲಾಗುತ್ತಿತ್ತು ಈ ವೇಳೆ ಬೆಕ್ಕಿನ ರಕ್ಷಣೆಗೆ ಒಬ್ಬೊಬ್ಬರಾಗಿ ಇಳಿದಿದ್ದಾರೆ ಆದರೆ ಬಾವಿಗೆ ಇಳಿದ ವ್ಯಕ್ತಿ ಮೇಲಕ್ಕೆ ಬರದೇ ಇರುವುದನ್ನು ಕಂಡು ಇನ್ನೋರ್ವ ವ್ಯಕ್ತಿ ಬಾವಿಗೆ ಹೀಗೆ ಐದು ಮಂದಿ ಬಾವಿಗೆ ಇಳಿದವರು ಬಾವಿಯಲ್ಲೇ ಉಸಿಗಟ್ಟಿ ಮೃತಪಟ್ಟಿದ್ದಾರೆ.

ಬಾವಿಗೆ ಇಳಿದ ಆರು ಜನರ ಪೈಕಿ ಐವರು ಮಂದಿ ಬಾವಿಯಲ್ಲೇ ಸಾವನ್ನಪ್ಪಿದ್ದರೆ. ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಕೆಳಗೆ ಇಳಿದಿದ್ದ ಒಬ್ಬನನ್ನು ಪೊಲೀಸರು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಕ್ಷಣಾ ತಂಡ ಐದು ಮೃತದೇಹಗಳನ್ನು ಹೊರತೆಗೆದಿದೆ. ಅಹಮದ್‌ನಗರದ ನೆವಾಸಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಧನಂಜಯ್ ಜಾಧವ್ ತಿಳಿಸಿದ್ದಾರೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next